ಯೋಚನೆ ಮಾಡುತ್ತಾ ಕೂತಿದ್ದೆ!
ಅಚಾನಕ್ಕಾಗಿ ಕಿಟ್ಟು ಪುಟ್ಟು ಚಿತ್ರ ನೆನಪಿಗೆ ಬಂತು.. ಯಾಕೋ ಆ ಚಿತ್ರ ನೋಡಬೇಕು ಅನ್ನಿಸಿತು. ಪರದೆಯ ಮೇಲೆ ಚಿತ್ರ ಓಡುತ್ತಿತ್ತು. ಬೆರಳುಗಳು ಕೀಲಿ ಮಣೆಯ ಮೇಲೆ ನರ್ತನ ಮಾಡುತಿತ್ತು.
"ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ
ನುಡಿ"ಮುತ್ತೊಂದ" ಕಳಿಸಿರುವೆ ಮೆತ್ತಗೆ ಮೆತ್ತಗೆ ರೀಡ್"
ಅರೆ ಇದೇನು ಹಾಡಿನ ಸಾಹಿತ್ಯವೇ ಬದಲಾಯಿತೆ ಎನ್ನುತ್ತಾ ಕತ್ತೆತ್ತಿ ಸುತ್ತಲೂ ನೋಡಿದೆ! ಮೊಬೈಲ್ ಕ್ರೀಕ್ ಕ್ರೀಕ್ ಅಂತ ಸದ್ದು ಮಾಡಿತು. ಗಡಿಯಾರ ನೋಡಿದೆ.. ಹಲ್ಲು ಕಿರಿದೆ..
ಹೊರಗೆ ಓಡಿ ಬಂದು ಆಕಾಶದ ಕಡೆಗೆ ಕಣ್ಣು ಹಾಯಿಸಿದೆ... ಸೂರ್ಯದೇವ ನಗುತ್ತಲಿದ್ದ..
ನಾನು "ಬೆಳಕು ಬೀರುತಾ ನೀ ಬರುವೆ .... ಇಂದೇಕೆ ನಗುತಲಿರುವೆ" ಎಂದು ಕೇಳಿದೆ
ಆಗ ಸೂರ್ಯದೇವ "ಕಾಂತ.. ಪ್ರಕೃತಿಗೆ ನಾನು ಬೆಳಕನ್ನು ಕೊಡುತ್ತಿರುವೆ.. ಇನ್ನೊಬ್ಬರು ಜ್ಞಾನದ ಬೆಳಕನ್ನು ಕೊಡುತ್ತಲಿರುವರು... ನನ್ನ ಬೆಳಕು ಹೊರಜಗತ್ತಿಗೆ.. ಅವರ ಬೆಳಕು ಒಳ ಜಗತ್ತಿಗೆ... ಅಂತ ಹೇಳಿ ಕಪ್ಪು ಕನ್ನಡಕ ಧರಿಸಿ ಮೋಡದ ಮರೆಯಲ್ಲಿ ಮರೆಯಾದ!
ಯೋಚಿಸಿದೆ ಹೌದಲ್ವಾ! . ಅಶೋಕ ಸಾಮ್ರಾಟ ಕಳಿಂಗ ಯುದ್ಧವಾದ ಮೇಲೆ ಅಪಾರ ನಷ್ಟವನ್ನು ನೋಡಿ ಸಹಿಸಲಾರದೆ ಶಾಂತಿಯ ಮೊರೆ ಹೊಕ್ಕನು. ನಮ್ಮ ಗೆಳೆಯ ಸುಂದರ ಹೃದಯದ ಅಶೋಕ್ ಸಾಮ್ರಾಟರು ನಮ್ಮ ಮನದೊಳಗೆ ನಡೆಯುತ್ತಿರುವ ಯುದ್ಧಕ್ಕೆ ಬಿಳಿ ಬಾವುಟ ತೋರಿಸುವ ಸುಂದರ ಸಂದೇಶ ಕಳುಹಿಸುತ್ತಿದ್ದಾರೆ. ಎಷ್ಟು ಸಾಮ್ಯತೆ ಅಲ್ಲವೇ!. ಹೌದು ಆ ಹೆಸರಿನಲ್ಲೇ ಅಂಥಹ ಒಂದು ತಾಕತ್ ಇದೆ.
ಆ ಆಶೋಕ್ ಸಾಮ್ರಾಟ ಯುದ್ಧದ ನಂತರ ಶಾಂತಿ ಸ್ಥಾಪಿಸಿದರು.. ನಮ್ಮ ನುಡಿಮುತ್ತುಗಳ.. ಸ್ನೇಹಲೋಕದ ಸಾಮ್ರಾಟ್ ಮನದೊಳಗೆ ನಡೆಯುತ್ತಿರುವ ಕಾಳಗವನ್ನು ನಿಲ್ಲಿಸಲು ಸುಂದರ ನುಡಿಮುತ್ತುಗಳನ್ನು ಹೆಣೆಯುತ್ತಾರೆ.
ಅಶೋಕ್ ಸರ್ ಹುಟ್ಟು ಹಬ್ಬದ ಶುಭಾಶಯಗಳು. ಹೃದಯ ಸಿಂಹಾಸನದಲ್ಲಿ ಕುಳಿತಿರುವ ನಿಮ್ಮ ಸಂಸಾರದಲ್ಲಿ, "ಕುಶಿ" ಎನ್ನುವ ನಿಮ್ಮ ಮನೆಯ ದೀಪ, ಸದಾ "ವಿನೋದ"ದಿಂದ ನಗು ನಗುತ್ತಾ... ನಿಮ್ಮ ಮುಗ್ಧ ಸುವಾಸಿತ ನಗುವಿನ ಜೊತೆಯಲ್ಲಿ ಸದಾ ಜೀವನದಲ್ಲಿ ಬೆಳಕು ತುಂಬಿರಲಿ.
(ಹುಟ್ಟು ಹಬ್ಬದ ಸಂದೇಶವನ್ನು ತುಳು ಭಾಷೆಯಲ್ಲಿ ಬರೆದು ಕೊಟ್ಟ ಸ್ಮೈಲಿಂಗ್ ಸಿಸ್ಟರ್ (ಎಸ್ ಎಸ್ = ಸುಲತ ಶೆಟ್ಟಿ ಅವರಿಗೆ ಧನ್ಯವಾದಗಳು)
ಅಚಾನಕ್ಕಾಗಿ ಕಿಟ್ಟು ಪುಟ್ಟು ಚಿತ್ರ ನೆನಪಿಗೆ ಬಂತು.. ಯಾಕೋ ಆ ಚಿತ್ರ ನೋಡಬೇಕು ಅನ್ನಿಸಿತು. ಪರದೆಯ ಮೇಲೆ ಚಿತ್ರ ಓಡುತ್ತಿತ್ತು. ಬೆರಳುಗಳು ಕೀಲಿ ಮಣೆಯ ಮೇಲೆ ನರ್ತನ ಮಾಡುತಿತ್ತು.
"ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ
ನುಡಿ"ಮುತ್ತೊಂದ" ಕಳಿಸಿರುವೆ ಮೆತ್ತಗೆ ಮೆತ್ತಗೆ ರೀಡ್"
ಅರೆ ಇದೇನು ಹಾಡಿನ ಸಾಹಿತ್ಯವೇ ಬದಲಾಯಿತೆ ಎನ್ನುತ್ತಾ ಕತ್ತೆತ್ತಿ ಸುತ್ತಲೂ ನೋಡಿದೆ! ಮೊಬೈಲ್ ಕ್ರೀಕ್ ಕ್ರೀಕ್ ಅಂತ ಸದ್ದು ಮಾಡಿತು. ಗಡಿಯಾರ ನೋಡಿದೆ.. ಹಲ್ಲು ಕಿರಿದೆ..
ಹೊರಗೆ ಓಡಿ ಬಂದು ಆಕಾಶದ ಕಡೆಗೆ ಕಣ್ಣು ಹಾಯಿಸಿದೆ... ಸೂರ್ಯದೇವ ನಗುತ್ತಲಿದ್ದ..
![]() |
| ನನಗಿಂತಲೂ ಚೆನ್ನಾಗಿ ನಗುತ್ತಾರೆ ಅಶೋಕ್ ಶೆಟ್ಟಿ! (ಚಿತ್ರಕೃಪೆ ಅಂತರ್ಜಾಲ) |
ನಾನು "ಬೆಳಕು ಬೀರುತಾ ನೀ ಬರುವೆ .... ಇಂದೇಕೆ ನಗುತಲಿರುವೆ" ಎಂದು ಕೇಳಿದೆ
ಆಗ ಸೂರ್ಯದೇವ "ಕಾಂತ.. ಪ್ರಕೃತಿಗೆ ನಾನು ಬೆಳಕನ್ನು ಕೊಡುತ್ತಿರುವೆ.. ಇನ್ನೊಬ್ಬರು ಜ್ಞಾನದ ಬೆಳಕನ್ನು ಕೊಡುತ್ತಲಿರುವರು... ನನ್ನ ಬೆಳಕು ಹೊರಜಗತ್ತಿಗೆ.. ಅವರ ಬೆಳಕು ಒಳ ಜಗತ್ತಿಗೆ... ಅಂತ ಹೇಳಿ ಕಪ್ಪು ಕನ್ನಡಕ ಧರಿಸಿ ಮೋಡದ ಮರೆಯಲ್ಲಿ ಮರೆಯಾದ!
![]() |
| ಅವರು ಕಲಿಸುವ ನುಡಿಮುತ್ತುಗಳು ಯಾವತ್ತಿಗೂ ಸೂಪರ್ ಕೂಲ್! (ಚಿತ್ರಕೃಪೆ - ಅಂತರ್ಜಾಲ) |
ಯೋಚಿಸಿದೆ ಹೌದಲ್ವಾ! . ಅಶೋಕ ಸಾಮ್ರಾಟ ಕಳಿಂಗ ಯುದ್ಧವಾದ ಮೇಲೆ ಅಪಾರ ನಷ್ಟವನ್ನು ನೋಡಿ ಸಹಿಸಲಾರದೆ ಶಾಂತಿಯ ಮೊರೆ ಹೊಕ್ಕನು. ನಮ್ಮ ಗೆಳೆಯ ಸುಂದರ ಹೃದಯದ ಅಶೋಕ್ ಸಾಮ್ರಾಟರು ನಮ್ಮ ಮನದೊಳಗೆ ನಡೆಯುತ್ತಿರುವ ಯುದ್ಧಕ್ಕೆ ಬಿಳಿ ಬಾವುಟ ತೋರಿಸುವ ಸುಂದರ ಸಂದೇಶ ಕಳುಹಿಸುತ್ತಿದ್ದಾರೆ. ಎಷ್ಟು ಸಾಮ್ಯತೆ ಅಲ್ಲವೇ!. ಹೌದು ಆ ಹೆಸರಿನಲ್ಲೇ ಅಂಥಹ ಒಂದು ತಾಕತ್ ಇದೆ.
ಆ ಆಶೋಕ್ ಸಾಮ್ರಾಟ ಯುದ್ಧದ ನಂತರ ಶಾಂತಿ ಸ್ಥಾಪಿಸಿದರು.. ನಮ್ಮ ನುಡಿಮುತ್ತುಗಳ.. ಸ್ನೇಹಲೋಕದ ಸಾಮ್ರಾಟ್ ಮನದೊಳಗೆ ನಡೆಯುತ್ತಿರುವ ಕಾಳಗವನ್ನು ನಿಲ್ಲಿಸಲು ಸುಂದರ ನುಡಿಮುತ್ತುಗಳನ್ನು ಹೆಣೆಯುತ್ತಾರೆ.
![]() |
| ನುಡಿಮುತ್ತುಗಳು ತಂಡ ಒಂದು ಸುಂದರ ಸ್ನೇಹ ಲೋಕ ! (ಚಿತ್ರಕೃಪೆ ಅಂತರ್ಜಾಲ) |
ಇಂತಹ ಅಮರ ಸ್ನೇಹ ಬಯಸುವ ಸುಂದರ ಹೂವಿನ ಮನಸ್ಸುಳ್ಳ ಅಶೋಕ್ ಅವರದು ಇಂದು ಹುಟ್ಟಿದ ಹಬ್ಬ. ಇಂತಹ ಸಹೃದಯದ ಸುಂದರ ಮನಸ್ಸಿನ ನಗುಮೊಗದ ವ್ಯಕ್ತಿತ್ವಕ್ಕೆ ಶುಭಾಶಯಗಳನ್ನು ಕೋರುವ ಭಾಗ್ಯ ನನ್ನದು.
"ದಿನೋಲ ಸೂರ್ಯೇ ಮೂಡನಗ ಪೊಸತ್ ಭರವಸೆದ ಸಂದೇಶ ಪಥರ್ಪೆ
ಮಾತಾ ಭರವಸೆಲು ಜೀವನದ ಬೊಲ್ಪು ಆಪುಂಡು
ಜೀವನ ಶಾಂತಿದ ತಾದಿ ಆಪುಂಡು
ಶಾಂತಿ ಸಂತೋಷದ ತಾದಿ ಆಪುಂಡು
ಸಂತೋಷ ದಿನನು ಬೊಲ್ಪು ಮಲ್ಪವುಂಡು
ದಿನ ಪೂರ ಸಮಯ ಎಡ್ಡೆಡು ಇಪ್ಪಡು ಪಂದು ಬೇಡುವೆ
ಪುಟ್ಟಿನ ಪರ್ಬದ ಹಾರೈಕೆ!"
![]() |
| ಇದಪ್ಪಾ ನಗು ಅಂದ್ರೆ ಸದಾ ಹೀಗೆ ಇರಲಿ! (ಚಿತ್ರಕೃಪೆ - ವಿಜಯ್ ಆದಿತ್ಯ) |
(ಹುಟ್ಟು ಹಬ್ಬದ ಸಂದೇಶವನ್ನು ತುಳು ಭಾಷೆಯಲ್ಲಿ ಬರೆದು ಕೊಟ್ಟ ಸ್ಮೈಲಿಂಗ್ ಸಿಸ್ಟರ್ (ಎಸ್ ಎಸ್ = ಸುಲತ ಶೆಟ್ಟಿ ಅವರಿಗೆ ಧನ್ಯವಾದಗಳು)



