Thursday, December 30, 2021

The team work together, eats togethers.. stays together!!!

The team work together, eats togethers.. stays together!!!

Sri what is this invincible team means...?

I just looked at the direction of the question came in...

A board was smiling at me and repeated the question..!

I winked at it, and said "see you came here for a specific reason...after the reasoning is perfect, and worth the efforts.. this is called bonding"

"You will be sent back to the location.. there again you will be subjected to the required challenges.. and you will end up in a fine tuned environment .. and you will feel happy start serving the product.. This is called de-bonding"

"You will have many flaws, that needs to be calibrated, repaired.. you will be subjected to the calibration process or some bad moments from your life will be taken out and reinfused with new lease of life.. This is called re-exporting process.  This helps you to rejuvenate and life will be full of enthusiasm"  

"Some times you can not leave your problems.. nor live with the problems...will be sent for a temporary shifting.... that eases you up and you will again charged up"

"many times work from home will be the best option...you will be at your best environment, no kiri kiri of travelling, no waste of time.... you will be at your best ... and you do wonders.. that ignites your passion of achieving great success and finishing the project on the dotted line... "

"Arey arey.. what sri you are bringing all the logistics terms here.. what is this?"

"arey yaar ... logistics is nothing but logic + statistics... when you interpret the law with logic and put the statistics properly it becomes logistics... that is the life... means.. you question and get the answer which is logically right and put the same in the statistics tab...that becomes logistics for your life.."

See the below image... every thing in the image is in the motion... 

Chariot is moving, 

Arjuna aiming the arrow

Krishna taking care of the chariot

Horses are running

The flag on the chariot is fluttering 

When there is a movement.. you will be moving ahead.. that is logistics...!

Super sri..really i liked the statement... ok tell me ... you said.. The team work together, eats togethers.. stays together!!! 

"Yes"

"sri Can you explain..?"

"See the beautiful team had lunch together.. spent invaluable time together.. pulling each other leg, laughing out loud..at the same time eating delightful stuff.." 

"These moments spent together just ignites the bonding...see here people from warehouse were there, people from physically moving the material in and out were there... people specialist in the documentation front were there.. and above all the the team manager who is taking care of the team getting along with them... that is called the team spirit.."

"sri that's a nice way of putting the team together ... can you introduce them to me one by one"

"yes board.. its my privilege will introduce by their names in alphabetical order "






Archana: Not in the picture.. but the super boss of this invincible team... There is no problem which she cant find the solution with 100% perfect compliance

Aruna - The manager of this invincible team she is simple, down to earth.. smiling attitude.. that solve most of the problem upfront

Ajaz - Smiling guy, thinks with the foot down, and gives a perfect clarification for everything does

Hemanth - Soft attitude, smile on the face, and just puts head in to his work, and sees that it gets over before logs out

Kishor - When the documents requires, he quietly completes the job, concentration is what it demands, yes he has it

Paul - not in the picture today...but quickly learnt the ladder to climb and a reliable source now 

Siva - A front face, gets in to the grove and resolves the subject with a purpose and gets in to challenge with success

Suresh - You name it and he has the solution in a jiffy.. he has wonderful knowledge about the subject, and put a wonderful effort to manage the show

Subrahmanya  - Cool guy..  Meticulously work towards target by looking at the solution from every end of the corner... he plugs all the possible solution to any project.. 

Sri:  #$#$%##%$%$%$%$%

Wow..... that's great team to reckon with ... The year 2022 not only becomes more vibrant for this invincible team.. but successful in meeting up the challenges and stepping up the gas pedal for a great success with a superb cycle time...!!!

Sunday, November 7, 2021

ಕೇಳು ಮಗುವೇ ಕಥೆಯ ... !

ಅಜ್ಜಿ ಅಜ್ಜಿ ಒಂದು ಕಥೆ ಹೇಳಜ್ಜಿ .. 

ಮಕ್ಕಳು, ದೊಡ್ಡವರು ಅನ್ನದ ಹಾಗೆ ಪೀಡಿಸಲು ಶುರು ಮಾಡಿದಾಗ.. ಕರುನಾಡಿನ ರಂಗ ಮಂದಿರಕ್ಕೆ ಹಾಗೂ ಚಿತ್ರರಂಗಕ್ಕೆ ಅಡಿಪಾಯ ಹಾಕಿಕೊಟ್ಟ ಶ್ರೀ ಗುಬ್ಬಿ ವೀರಣ್ಣ ಅವರ ವಂಶದ ಕುಡಿ 
ಶ್ರೀಮತಿ ಜಯಶ್ರೀಯವರು ಅವರ ಅದ್ಭುತ ಕಂಠದಲ್ಲಿ ಶುರು ಮಾಡಿದರು.. 

ನಾಟಕ ರಂಗದ ದೊಡ್ಡ ಘಂಟೆ ಢಣ ಢಣ ಬಾರಿಸಿತು.. ಆಗ ಶುರುವಾಯಿತು ಅದ್ಭುತ ಸಮಯ 

ಅನೇಕಾನೇಕ ಪ್ರತಿಭೆಗಳನ್ನು
ಎಚ್ಚರಿಸಿದ ಕರೆ ಘಂಟೆ 


ಪ್ರತಿಭಾ ಗಣಿ ಶ್ರೀಮತಿ ಜಯಶ್ರೀ 

ನಾಟಕದ ತಾಲೀಮು ನಮ್ಮ ಶಾಲೆಯಲ್ಲಿ 

"ನೋಡ್ರಪ್ಪಾ.. ಈ ಶಾಲೆ ಇದೆಯಲ್ಲ ಇದೊಂದು ಅದ್ಭುತ ಕಲಿಕಾ ಕೇಂದ್ರ.. ಬೆಳೆದು ಹೆಮ್ಮರವಾದ ಎಷ್ಟೋ ಮರಗಳಿಗೆ ಆಶ್ರಯತಾಣವಿದು.. ಇತ್ತೀಚಿಗೆ ತಾನೇ ಶತಮಾನೋತ್ಸವ ಆಚರಿಸಿದ ಈ ದೇಗುಲಕ್ಕೆ ಶ್ರೀಮತಿ ಆನಿಬೆಸಂಟ್ ಅಡಿಪಾಯವಿಟ್ಟರು  ನೀರೆರೆದು ತಾನು ಬೆಳೆದು, ಸಂಸ್ಥೆಯನ್ನು ಬೆಳೆಸಿದ ಶ್ರೀ ಎಚ್  ಎನ್ ಎಂದೇ ಖ್ಯಾತರಾಗಿರುವ ಪ್ರಾತಃ ಸ್ಮರಣೀಯರು ಎಚ್ ನರಸಿಂಹಯ್ಯ ಅವರ ಕನಸಿನ ಕೂಸಿದು.. 










ಅನೇಕಾನೇಕ ಪ್ರತಿಭೆಗಳನ್ನು ರಾಜ್ಯಕ್ಕೆ, ದೇಶಕ್ಕೆ ಕೊಟ್ಟಿರುವ ಈ ಶಾಲೆಯ ವಿದ್ಯಾರ್ಥಿಗಳ ಒಂದು ತಂಡವೇ ಇಲ್ಲಿ ಬಂದಿದೆ ನೋಡಿ.. 

ನೋಡಿ ಅವನೇ ನಿಂಬೀಯ ಅಂತ ತಾರಕ ಸ್ವರದಲ್ಲಿ ಹಾಡಿದ ವೆಂಕಿ, ಹೌದು ಬಾಲ ನಟ ಚೇತನ್ ತರಹ ಇದ್ದ ಶಶಿ, ಓದು ಬೇರೆ ಬದುಕು ಬೇರೆ ಎಂದು ತೋರಿಸಿದ ಎಚ್ ಡಿ ಗಿರೀಶ, ನಮ್ಮ ಅಭಿನವ ಭಾರ್ಗವ ವಿಷ್ಣುವಂತೆ ಎಡಗೈ ಖ್ಯಾತಿಯ ರಮೇಶ, ಯೋಗಾಸನವೆಂದರೆ ಪ್ರಸಾದ್, ಪ್ರಸಾದ್ ಎಂದರೆ ಯೋಗಾಸನ ಎಂದು ಹೆಸರಾಗಿರುವ ಪ್ರಸಾದ್, ಆ ಕಾಲದ ಜಯಂಟ್ ರೋಬೋಟ್ ಧಾರಾವಾಹಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ಶ್ರೀಧರ, ಸದಾ ಸದ್ದಿಲ್ಲದೇ ಓದುತಿದ್ದ, ಬುದ್ದಿವಂತರಿಗೆ ಠಕ್ಕರ್ ಕೊಡುತ್ತಿದ್ದ ಲೀಲಾ, ಏಮ್ರಾ ನಾಯ್ಡು ಅಂದಾಗ ಸುಂದರ ನಗು ಕೊಡುವ ಶ್ರೀನಿವಾಸ ನಾಯ್ಡು, ಹೆಸರಲ್ಲಿ ಮಾತ್ರವಲ್ಲದೆ ತರಲೆಯಲ್ಲೂ ಚಕ್ರವರ್ತಿಯಾಗಿರುವ ಚಕ್ರವರ್ತಿ... ಬಂದಿದ್ದಾರೆ.. ಅವರುಗಳ ಮಾತಾಡುವ ಶೈಲಿ, ಆ ಗೆಳೆತನದ ಬಂಧ.. ಅದನ್ನು ಕೇಳುವುದೇ ಒಂದು ಚಂದ.. 



ಇಂದು ಅವರವರ ಶಕ್ತ್ಯಾನುಸಾರ ಬದುಕಲ್ಲಿ ಮಹತ್ತರ ಎತ್ತರ ಏರಿದ್ದಾರೆ.. ಆದರೆ ಅವರು ಇಂದು ಸೇರಿರುವುದು, ಇಂದು ಏನಾಗಿದ್ದಾರೆ ಅನ್ನೋದಕ್ಕಲ.. ಅವರು ಶಾಲೆಯಲ್ಲಿದ್ದಾಗ ನೆಡೆದ ಕೀಟಲೆ ಪ್ರಸಂಗಗಳು,ಸಾಧನೆಗಳು , ತರಲೆಗಳು ಇದನ್ನೆಲ್ಲಾ ಮತ್ತೆ ಮತ್ತೆ ಮೆಲುಕು ಹಾಕುತ್ತಾ, ಆ ದಿನಗಳಿಗೆ ಲಗ್ಗೆ ಹಾಕುತ್ತಿದ್ದಾರೆ.. ಅಂದರೆ ಅವರು ತಮ್ಮ ಇಂದಿನ ಸಾಧನೆ, ಹಣ, ಅಂತಸ್ತು, ಅಧಿಕಾರ ಎಲ್ಲವನ್ನೂ ಮರೆತು, ಆ ಶಾಲಾದಿನಗಳಲ್ಲಿ ಜೊತೆಯಾಗಿದ್ದ ಗೆಳೆತನವನ್ನು ನೆನಪಿಸಿಕೊಳ್ಳುವುದಕ್ಕೆ ಮಾತ್ರ ಇಲ್ಲಿ ಸೇರಿದ್ದಾರೆ.. 


ಇವರೆಲ್ಲರ ಮಾತುಕತೆಗಳನ್ನು ಕೇಳಿಸಿಕೊಂಡು ಒಂದು ಪುಟ್ಟ ಕತೆಯನ್ನು ಹೇಳುವೇ ಕೇಳಿ.. 

ಒಂದು ದಟ್ಟ ಕಾಡು.. ಅಲ್ಲೊಂದು ರಾಜ.. ಅಂದರೆ ಸಿಂಹರಾಜ.. ಅದಕ್ಕೆ ಜೀವನ ಬೇಸರವಾಗಿದೆ ಎಂದು ಹೇಳುತ್ತಾ.. ಎಲ್ಲಾ ಪ್ರಾಣಿ, ಪಕ್ಷಿಗಳನ್ನು ಕರೆಯಲು ನರಿಗೆ ಘಂಟೆ ಬಾರಿಸುತ್ತಾ ಸಂದೇಶವನ್ನು ಸಾರಲು ಹೇಳುತ್ತದೆ.. 



ನರಿ ಘಂಟೆ ಬಾರಿಸುತ್ತಾ  " ಕೇಳ್ರಪ್ಪ ಕೇಳ್ರಿ ನಮ್ಮ ಕಾಡಿನ ರಾಜ ಸಿಂಹರಾಜನಿಗೆ ಬೇಸರವಾಗಿರುವ ಕಾರಣ.. ಎಲ್ಲರೂ  ಮೃಗರಾಜನಿಗೆ ಸಂತಸ ಉಂಟು ಮಾಡುವಂತಹ ಕಾರ್ಯಕ್ರಮಗಳನ್ನು ಪ್ರದರ್ಶಿಸಬೇಕಂತೆ.. "

ಮೃಗರಾಜನ ಅಪ್ಪಣೆ.. ಆದೇಶ.. ಏನಾದರೂ ಅಂದುಕೊಳ್ಳಿ.. ಅದಕ್ಕೆ ಬದ್ಧವಾಗಿರಲೇ ಬೇಕು ಎಂದು.. ಎಲ್ಲವೂ ಸೇರಿದವು.. ಅದಕ್ಕೆ ಜೊತೆಯಾಗಿ ತಾಲೀಮು ನೆಡೆಯುತ್ತಿದ್ದ ಒಂದು ತಂಡವು ಈ ಕೆಳಗಿನ ಚಿತ್ರದಂತೆ ದುಂಡಗೆ ಕೂತರು.. 

ಮೊದಲು ಪ್ರಾರ್ಥನೆ "ನಿಂಬೀಯ ಬನಾದ ಮ್ಯಾಗಡ ಚಂದ ಮಾ ಚಂಡಾಡಿದ" ಎಲ್ಲರೂ ಕಿವಿ ಮುಚ್ಚಿಕೊಂಡು ಆ ಸೊಗಸಾದ ಎತ್ತರ ಸ್ಥಾಯಿಯ ದನಿಯಲ್ಲಿ ಹಾಡಿದವರಿಗೆ  ಕರತಾಡನ ಮಾಡಿದರು.. ತನ್ನ ಹಾಡು ತನ್ನದು ತನ್ನ ರಾಗ ತನ್ನದು ಎಂದು ಹಾಡನ್ನು ಎಲ್ಲರ ಕಿವಿಗೆ ಹಾಗೂ ಹೃದಯಕ್ಕೆ ಮುಟ್ಟಿಸಿದಾಗ ಎಲ್ಲರ ಎದೆಯ ಬಡಿತ ಒಂದೆರಡು ಸಂಖ್ಯೆ ಹೆಚ್ಚಾಗಿದ್ದು ಸುಳ್ಳಲ್ಲ.. (ವೆಂಕಿ)

"ರೋಬಾಟ್.. ಜಯಂಟ್ ರೋಬೋಟ್.. " ಎಂದು ನಮ್ಮ ಪ್ರಪಂಚವನ್ನು ಹೇಗೆ ರಕ್ಷಿಸಿತು ಎಂಬುದನ್ನು ಜಯಂಟ್ ರೋಬೋಟ್ ನೋಡುವ ಸಲುವಾಗಿ ಗುರುವಾರ ಪಾಠದ ವೇಳೆಯನ್ನು ಬದಲಿಸಿಕೊಂಡು ಟಿವಿ ನೋಡುವಷ್ಟು ಹುಚ್ಚು ಹಿಡಿಸಿದ್ದ ಧಾರಾವಾಹಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದಾಗ ಕಿವಿ ತೂತು ಬೀಳುವಷ್ಟು ಜೋರಾದ ಚಪ್ಪಾಳೆ..  (ಶ್ರೀಧರ)

"ಈ ಅಂಜದ ಎದೆಯಲ್ಲಿ ನಂಜೇ ಇಲ್ಲ ಬಗ್ಗುವ ಆಳಲ್ಲ ತಲೆ ತಗ್ಗಿಸಿ ಬಾಳೋಲ್ಲ" ಎಂದು ಹಾಡಿ ವಿಷ್ಣುವಿನ ತರಹವೇ ಅಭಿನಯ ಮಾಡುತ್ತಾ.. ಎಡಗೈಯಲ್ಲಿ ಬೌಲಿಂಗ್ ಅಭಿನಯ ಮಾಡಿದಾಗ ಮೃಗರಾಜನ ಮೊಗದಲ್ಲಿ ಮೆಲ್ಲನೆ ನಗು ಮೂಡಲು ಆರಂಭಿಸಿತು.. (ರಮೇಶ)

"ನೋಡ್ರಪ್ಪಾ.. ಬದುಕಲ್ಲಿ ಓದೋದೇ ಮುಖ್ಯವಲ್ಲ.. ಜಗತ್ತನ್ನು ಓದಬೇಕು .... ಅದರ ಇತಿಮಿತಿಗಳನ್ನುಅರಿತು . ಜಗತ್ತಿಗೆ ಸರಿಯಾದ ಮಾಹಿತಿ ನೀಡಬೇಕು" ಎಂದು ಜಗತ್ತನ್ನು ಅಂಗೈಯಲ್ಲಿ ತೋರಿಸಿದಾಗ ಮೃಗರಾಜ ಎದ್ದು ನಿಂತು ತಲೆಬಾಗಿ ವಂದಿಸಿತು.. (ಎಚ್ ಡಿ ಗಿರೀಶ)

"ಓದು ಮೆದುಳಿಗೆ.. ವ್ಯಾಯಾಮ ದೇಹಕ್ಕೆ.. ದೇಹವನ್ನು ಕೊಂಚ ದಂಡಿಸಿದಾಗ ಬುದ್ದಿ ನಮ್ಮ ಮಾತು ಕೇಳುತ್ತದೆ ಎಂದು ಮಯೂರಾಸನ ಮಾಡಿದಾಗ... ಮೃಗರಾಜ ಮೆಲ್ಲನೆ ನೆಡೆದು ಬಂದು ತಬ್ಬಿ ಮುದ್ದು ಮಾಡಿತು.. (ಪ್ರಸಾದ್)

"ಕಲಿಕೆಗೆ ಕೊನೆಯೇ ಇಲ್ಲ.. ಓದುವ ಹಾದಿ ಚೆನ್ನಾಗಿರಬೇಕು.. ಸಹಪಾಠಿಗಳ ಒಡನೆ ಓದುತ್ತಾ,  ಗೆಲ್ಲುತ್ತಾ ಹೋಗಬೇಕು .. ಅಂಕೆ ಇಲ್ಲದ ಜಗತ್ತಿನಲ್ಲಿ ಅಂಕ ಪಟ್ಟಿ ಬೇಕು" ಈ ಮಾತಿಗೆ ಸಿಂಹ ತಲೆಯಾಡಿಸಿ ಒಪ್ಪಿಗೆ ಸೂಚಿಸಿತು.. (ಲೀಲಾ)

"ತರಲೆ ಇಲ್ಲದ ಜೀವನ ಅದೊಂದು ಜೀವನವೇ.. .. ಸದಾ ನಗುತ್ತಿರಬೇಕು.. ನಮ್ಮ ಮುಂದಿನ ಬದುಕಲ್ಲಿ ಅಂಕ ಪಟ್ಟಿಗಿಂತ.. ತರಲೆ ಪಟ್ಟಿಗಳು ಯಾವತ್ತಿಗೂ ನೆನಪಲ್ಲಿ ಉಳಿದಿರುತ್ತೆ .. ನಗಬೇಕು.. ನಗುತ್ತಲಿರಬೇಕು.. ಅದುವೇ ಜೀವನ.. " ವಾಹ್ ಎನ್ನುತ್ತಾ ಎರಡೂ ಕೈಯಲ್ಲಿ ಚಪ್ಪಲ್ಲಿ ಬಾರಿಸಿತು..(ಚಕ್ರವರ್ತಿ) 

"ಸುಂದರವದನ ಅರವಿಂದವನ.. " "ಆಹಾ ಬೆಳದಿಂಗಳು ಚೆಲ್ಲುವ ಚಂದಮಾಮ ಇರುವಾಗ.. ಪ್ರತಿ ಕ್ಷಣವೂ ಸುಂದರವೇ.. ಆ ಮುದ್ದು ಮೊಗವನ್ನು ಸದಾ ನೋಡುವ ಆಸೆ " ಮೃಗರಾಜ ತನ್ನ ದೂರದಲ್ಲಿ ಒಂದು ಬಂಡೆಯ ಹಿಂದೆ ಕೂತಿದ್ದ ತನ್ನ ಇನ್ನೊಂದು ಸಿಂಹಕ್ಕೆ ಕಣ್ಣು ಹೊಡೆಯಿತು.. ಆ ಸಿಂಹ ತನ್ನ  ಸಿಂಹಿಣಿಯನ್ನು ಒಮ್ಮೆ ನೋಡಿದಾಗ.. ಸಿಂಹಿಣಿ ಮೆಲ್ಲನೆ ಗುರ್ ಎಂದಿತು.. ಆದರೆ ತಕ್ಷಣಕ್ಕೆ ಒಂದು ನಗೆ ಕೊಟ್ಟಿತು..  (ಶಶಿ)

ಒಂದೇ ನಾಡು ಒಂದೇ ಕುಲವು ಒಂದೇ ದೈವವು.. ಹೌದು ಭಾಷೆ ಯಾವುದಾದರೇನು ಭಾವ ನವೀನ.. ಸುಂದರ ನಗೆಯ ಸರದಾರನಿಗೆ ಎಂದೆಂದೂ ಶ್ರೀನಿವಾಸನ ಕೃಪೆ ಇದ್ದೆ ಇರುತ್ತದೆ ಎಂದು ಹೇಳಿದಾಗ ಮೃಗರಾಜನ ಮೊಗ ಅರಳಿತು .. (ಶ್ರೀನಿವಾಸ್ ನಾಯ್ಡು)

ಮೃಗರಾಜ ಒಂದು ಸಣ್ಣಗೆ ಕಣ್ ಹೊಡೆದಾಗ.. ಈ ಇಡೀ ಕಾರ್ಯಕ್ರಮವನ್ನು ತನ್ನ ಮೂರನೇ  ಕಣ್ಣಿನಲ್ಲಿ ಚಿತ್ರಿಸಿ ಎಲ್ಲರಿಗೂ ಬಿತ್ತರಿಸುವ ಕೆಲಸ ಶುರು ಮಾಡಿತು.. (ಶ್ರೀ)

"ನರಿರಾಯ ಈ ಪುಟ್ಟ ಕಾರ್ಯಕ್ರಮ ಬಹಳ ಖುಷಿ ಕೊಟ್ಟಿತು.. ನೋಡಿ ... ಬಂದವರಿಗೆಲ್ಲಾ ಶ್ರೀ ಕೃಷ್ಣನ ಗೋಕುಲಕ್ಕೆ ಕಳಿಸಿ.. ಅಲ್ಲಿ ಅವರಿಗಾಗಿ ರೊಟ್ಟಿ, ಹಪ್ಪಳ, ನಿಂಬೆ ರಸದ ಪಾನಕ, ಚಟಪಟ ಅನಿಸುವ ತಿನಿಸುಗಳು, ಮೇತಿ ಅನ್ನ, ಜೀರಿಗೆ ಅನ್ನ, ಮೊಸರನ್ನ..ಇದರ ಜೊತೆಗೆ ಹಿತವಾದ ವಾತಾವರಣವನ್ನು ಅಣಿಮಾಡಲು ಹೇಳಿದ್ದೇನೆ.. ಹೋಗಿ ಅವರಿಗೆ ಪ್ರಯಾಸವಾಗದ ಹಾಗೆ ನೋಡಿ ಕೊಳ್ಳಿ ಎನ್ನುತ್ತಾ ಮೃಗರಾಜ ಎದ್ದು ನಿಂತು.. ಜೋರಾಗಿ ಕೂಗಿ ಎಲ್ಲರಿಗೂ ಶುಭ ಹೇಳಿತು.. 








"ಮಕ್ಕಳಾ .. ನಾವು ಎಲ್ಲಿದ್ದರೇನು, ಹೇಗಿದ್ದರೇನು., ನಮ್ಮ ನಮ್ಮ ಗೆಳೆತನ ಅಂದಿಗೂ, ಇಂದಿಗೂ, ಎಂದೆಂದಿಗೂ ಮರಯಲಾರದ್ದು.. ಜೊತೆಯಾಗಿರಬೇಕು, ಜೊತೆಯಾಗಿ ಕಾಲ ಕಳೆಯಬೇಕು .. ಮಳೆ ಬಂದೆ ಬರುತ್ತದೆ.. ಮಳೆಗೆ ಕಾಯಬೇಕು ಅಷ್ಟೇ .. ಈಗಲೇ ಇಷ್ಟು ನಕ್ಕು ನಲಿಯುವ ಈ ಮುಗ್ಧ ಗೆಳೆಯರ ಸಡಗರ ಮಳೆ ಬಂದಾಗ ಹೇಗಿರುತ್ತದೆ ಊಹಿಸಿಕೊಳ್ಳಿ"

ಬಂದ ಮಕ್ಕಳಿಗೆ ಖುಷಿಯಾಯಿತು.. ಹಾಗೆಯೇ ಈ ಕ್ಷಣವನ್ನು ಆನಂದಿಸಿದ ಎಲ್ಲರಿಗೂ ಸಂತಸ ನೂರ್ಮಡಿಯಾಯಿತು.. 




****
ಗೆಳೆಯರ ಜೊತೆಗೂಡಿ ಕಳೆದ ಪ್ರತಿ ಕ್ಷಣವೂ ಇಮ್ಮಡಿಯಾಗುತ್ತಾ ಹೋಗುತ್ತದೆ.. ಆ ಸವಿ ಕ್ಷಣಗಳನ್ನು ತಿರುಗಿಸಿ, ತಿರುಗಿಸಿ ಮೆಲುಕು ಹಾಕಿದಾಗ ಪ್ರತಿಕ್ಷಣವೂ ಸುಂದರ ಅತಿ ಸುಂದರ 

Friday, May 7, 2021

DFR.. The inspiring personality! - Part II

 "ಮೇಡಂ.... ಇವಳು ನನ್ನ ತಂಗಿ ಮೀನಾ.. ಇವಳು ಆಫೀಸ್ ಇಂದ ಮನೆಗೆ ಬರುವಾಗ .. ಯಾರೋ ಇವಳ ಹತ್ತಿರ ಬಂದು ಪರ್ಸ್ ಕಿತ್ತುಕೊಂಡು ಹೋಗಿದ್ದರು.. ಇವಳು ಪೊಲೀಸ್ ಸ್ಟೇಶನ್ನಿಗೆ ಹೋದರೆ ಸುಮ್ಮನೆ ಗೋಳಾಡಿಸುತ್ತಾರೆ ಅಂತ ಹೋಗಿಲ್ಲ.. ಈಗ ಸಂಜೆ.. ಪೊಲೀಸ್ ಸ್ಟೇಷನಿಂದ ಕರೆ ಬಂದಿತ್ತು.. ನಿಮ್ಮ ವಸ್ತುಗಳು ಒಂದು   ಮರದ ಹತ್ತಿರ ಬಿದ್ದಿತ್ತು.. ಅದರ ಪಕ್ಕ ಮಳೆಯಲ್ಲಿ ನೆಂದು ತೊಪ್ಪೆಯಾಗಿದ್ದ ವ್ಯಕ್ತಿಯೂ ಬಿದ್ದಿದ್ದನು .. ನೀವು ಕೂಡಲೇ ನಿಮ್ಮ ಮನೆ ಹತ್ತಿರ ಇರುವ ಸ್ಟೇಷನಿಗೆ ಬನ್ನಿ.. ಅಂತ ಹೇಳಿದರು. ನಮಗೆ ಏನೂ ತೋಚದೆ.. ನಿಮ್ಮ ನೆನಪು ಬಂತು.. ಅದಕ್ಕೆ ಕಷ್ಟವಾದರೂ ಸರಿ.. ದೂರವಾದರೂ ಸರಿ ಎಂದು ಈ ಅವೇಳೆಯಲ್ಲಿ ಬಂದೆ.. ಸಾರಿ ಮೇಡಂ.. ನಮಗೆ ನೀವೇ ದಾರಿ ತೋರಿಸಬೇಕು.. ನಮಗೆ ಪೊಲೀಸ್ ಸ್ಟೇಷನ್, ಪೊಲೀಸು ಅಂದ್ರೆ ಭಯ.. ಅದಕ್ಕೆ  ನನ್ನ ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಪ್ಪ, ಅಜ್ಜ ಅಜ್ಜಿ  ಚಿಂತೆಯಿಂದ ನಿದ್ದೆ ಮಾಡಿಯೇ ಇಲ್ಲ.. ನೋಡಿ ನೋಡಿ ಎಲ್ಲರೂ ನಿಮ್ಮನ್ನೇ ಕಾಯುತ್ತಿದ್ದಾರೆ.." ಅಂದದ್ದೇ ತಡ.. ರೂಮಿನಲ್ಲಿದ್ದ ಒಂದು ಕುಟುಂಬವೇ ಹಾಲಿಗೆ ಬಂದು ಕೈ ಮುಗಿದವು ಇವರಿಗೆ..

Scene shifted to Police Station

ಬ್ಯಾಗಿನಲ್ಲಿದ್ದ ಒಂದೊಂದೇ ವಸ್ತುವನ್ನು ತೆಗೆದು ನೋಡಿದರು.. ಕ್ರೆಡಿಟ್ ಕಾರ್ಡ್, ಮೊಬೈಲ್, ಡೆಬಿಟ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಲಿಪ್ಸ್ಟಿಕ್, ಬಾಚಣಿಗೆ, ಐ ಲೈನರ್, ಹೇರ್ ಬ್ಯಾಂಡ್, ಎಲ್ಲವನ್ನೂ ನೋಡಿದ ಮೀನಾ. ಮೇಡಂ ಇದ್ಯಾವುದು ನನ್ನದಲ್ಲ.. ಆದರೆ  ಬ್ಯಾಗ್ ಮಾತ್ರ ನನದು.. ನೋಡಿ ಕಾರ್ಡುಗಳ ಮೇಲೆ ಇರೋ ಹೆಸರು ನೋಡಿ., ಅದು  ನನ್ನದಲ್ಲ.. " ಸ್ವಲ್ಪ ಧೈರ್ಯದಿಂದ ಮೀನಾ ಉತ್ತರಿಸಿದಳು.. 

ಫೈಲಿಗೆ ಮೆಲ್ಲನೆ ಧೂಳು ಹಿಡಿಯೋಕೆ ಶುರುವಾಗಿತ್ತು.. ಏನ್ ಮಾಡೋದು.. ಜಗತ್ತನ್ನೇ ಅಲ್ಲಾಡಿಸುತ್ತಿದ್ದ ಕೊರೊನಾ.. ಅದರ ಮಧ್ಯೆ ಲಾಕ್ ಡೌನ್.. ಸಣ್ಣ ಪುಟ್ಟ ಕೇಸುಗಳು.. ಹೀಗೆ ಹತ್ತಾರು ಜಂಜಾಟಗಳಲ್ಲಿ ಇನ್ಸ್ಪೆಕ್ಟರ್ ಈ ಫೈಲಿನ ಕಡೆ ಗಮನ ಹರಿಸಿರಲಿಲ್ಲ.. 

ಆದರೆ ಕುತೂಹಲ ಅನ್ನೋ ಒಂದು ಬೆಕ್ಕು ಆಗಾಗ ಪೊಲೀಸ್ ಸ್ಟೇಷನ್ನಿಗೆ ಬಂದು ಇದರ ಬಗ್ಗೆ ಕ್ಯಾತೆ ತೆಗೆಯುತ್ತಲೇ ಇತ್ತು.. ಈ ಕೇಸಿನ ಬಗ್ಗೆ ಕುತೂಹಲ ಮುಂದೆ ಏನಾಗುತ್ತೋ ಅನ್ನುವ ತವಕ.. ಕಡೆಗೆ ಇಡೀ ಪ್ರಕರಣದ ರೂವಾರಿ ಇನ್ಸ್ಪೆಕ್ಟರನ್ನು ಘೇರಾವ್ ಮಾಡಿ ಮುಂದೆ ಏನಾಯಿತು ಎಂದು ತಿಳಿದುಕೊಳ್ಳಬೇಕು ಅಂತ ಧಮಕಿ ಹಾಕಿ ಅವರ ವಾಟ್ಸಾಪ್ ಸಂಖ್ಯೆಗೆ ಈ ರೀತಿಯ ಸಂದೇಶ ಹಾಕಿದರು.. 

"ನೋಡಿ ಸರ್ .. ಇಂದಿಗೆ ಒಂದು ವರ್ಷ ಆಯಿತು... ಮುಂದಿನ ಭಾಗ ಬಂದಿಲ್ಲ.. ಜೊತೆಗೆ ಕೇಸ್ ಏನಾಯಿತು.. ಮೀನಾ ಹೇಗಿದ್ದಾರೆ.. ಪರ್ಸ್ ಒಳಗಿದ್ದ ಐಟಂ ಯಾರದು..  ವ್ಯಕ್ತಿ ಯಾರು.. ಒಂದು ವರ್ಷವಾದರೂ ಈ ಕತೆಗೆ ಅಂತ್ಯ ಕೊಡಲಿಲ್ಲ ಅಂದರೆ ನೀವೆಂಥ ಮನುಷ್ಯರು.. ಮನುಷ್ಯತ್ವ ಇಲ್ವಾ.. "

ಪಿಂ ಪಿಂ ಎನ್ನುವ ಮೊಬೈಲ್ ಸದ್ದಿಗೆ ಕಣ್ಣುಜ್ಜಿಕೊಂಡು ಎದ್ದ ಇನ್ಸ್ಪೆಕ್ಟರ್  ಸಂದೇಶ ನೋಡಿ.. ನಸು ನಕ್ಕು.. "ಶರಣಪ್ಪ.. ಆ ಕೇಸ್ ಫೈಲ್ ತಗೊಂಡು ಬನ್ರೀ.. ಇದಕ್ಕೊಂದು ಮಂಗಳ ಹಾಡೋಣ.. "

ಶರಣಪ್ಪ "ಯಾವ ಫೈಲ್ ಸರ್.. ಇಲ್ಲಿ ನೂರಾರು ಫೈಲ್ ಇದಾವೆ"

"ಅದೇ ರೀ ಪರ್ಸ್, ಕಾಫಿ, ಸಿಗರೇಟ್, ಶ್ರೀಮತಿ ರೂಪ ಸತೀಶ್ ಅವರ ಹುಟ್ಟು ಹಬ್ಬ"

"ಓಹ್ ಅದಾ.. ಸರಿ ಸರ್ ತಂದೆ"

ಫೈಲ್ ಬಂತು.. ಒಂದೊಂದೇ ಹಾಳೆಗಳನ್ನು ತಿರುಗಿಸುತ್ತಾ.. ನೋಡುತ್ತಾ ಹೋದ ಹಾಗೆ.. ಕಣ್ಣುಗಳು ಅರಳಿತು.. ಕಣ್ಣುಜ್ಜಿಕೊಂಡು.. "ಶರಣಪ್ಪ..ಮನೆಗೆ ಹೋಗಿ ಫ್ರೆಶ್ ಆಗಿ ಬರ್ತೀನಿ.. ಒಂದು ಕೇಕು.. ಒಂದಷ್ಟು ಡೈರಿ ಮಿಲ್ಕ್ ಚಾಕೊಲೇಟ್.. ಒಂದು ಕೆಜಿ ಕಾಫಿ ಪುಡಿ.. ಒಂದೆರಡು ಕಾಫಿ ಮಗ್  ಎಲ್ಲಾ  ತಂದು ಬಿಡಿ..ಹಾಗೆ ಯಾರೋ ಅವರ ಅಡ್ರೆಸ್ ಕೇಳಿದ್ದರು ಅಲ್ವ.. ಅವರಿಗೂ ಅಡ್ರೆಸ್ ಕೊಡಿ.. ನಾ ಬರುವ ಹೊತ್ತಿಗೆ ಎಲ್ಲಾ ಸಿದ್ಧ ಮಾಡಿ.. ಕೇಸ್ ಮುಗಿಸಿ.. ಹಾಗೆ ಅವರ ಜನುಮದಿನಕ್ಕೂ ಶುಭಾಶಯಗಳನ್ನು ಹೇಳಿ ಬರೋಣ.. ಹಾಗೆ ಮೀನಾ ಸಂಜನಾ ಅವರಿಗೂ ಕರೆ ಮಾಡಿ ರೂಪ ಸತೀಶ್ ಅವರ ಮನೆಗೆ ಬರೋಕೆ ಹೇಳಿ.. "

"ಸರಿ ಸರ್"

ಜೀಪು ಮನೆ ಕಡೆ ಓಡಿತು.. 

ಕ್ಯಾಮೆರಾ ಕಟ್ ಆಯಿತು.. ಮತ್ತೆ ಕ್ಯಾಮೆರಾ ಆನ್ ಮಾಡಿದಾಗ ರೂಪ ಅವರ ಮನೆ ಗಿಜಿ ಗಿಜಿ ಅನ್ನುತ್ತಿತ್ತು.. ಅವರ ಗೆಳೆಯರು, ಬಂಧು ಮಿತ್ರರು.. ಸಹೋದ್ಯೋಗಿಗಳು, ನೆರೆಹೊರೆಯವರು ಬಂದಿದ್ದರು.. 

ಇನ್ಸ್ಪೆಕ್ಟರ್ ಬರುವ ಹೊತ್ತಿಗೆ.. ಸಂಜನಾ ಮೀನಾ ಹಾಗೂ ಅವರ ಮನೆಯವರು ಬಂದರು.. ಇನ್ಸ್ಪೆಕ್ಟರ್ ಒಂದು ಸಣ್ಣ ನಗೆ ಬೀರಿ ಎಲ್ಲಾ ಸರಿ ಹೋಗಿದೆ ಗಾಬರಿ ಬೇಡ ಎನ್ನುವ ಭಾವ ಕೊಟ್ಟರು.. ಅದನ್ನು ಕಂಡು ಮೀನಾ ಮತ್ತು ಸಂಜನಾ ನಿಟ್ಟುಸಿರು ಬಿಟ್ಟರು.. 

ರೂಪ ಸತೀಶ್ ಎಲ್ಲರನ್ನೂ ಕಂಡು ಖುಷಿ ಪಟ್ಟರು.. ಎಲ್ಲರ ಅಭಿನಂದನೆಗಳನ್ನು, ಶುಭಾಶಯಗಳನ್ನು ಸ್ವೀಕರಿಸಿ.. ತಣ್ಣನೆ ಕೂತರು.. 

ಎಲ್ಲರೂ ರೂಪ ಮೇಡಂ, ರೂಪಕ್ಕ, ರೂಪಸಿ.. ರೂಪಕ.. ರೂಪ ಸತೀಶ್ ಮೇಡಂ.. DFR ಕೇಕು ಕಟ್ ಮಾಡಿ ಅಂದಾಗ.. 

ಇನ್ಸ್ಪೆಕ್ಟರ್ ಹತ್ತಿರ ಬಂದು.. "ರೀ ಸರ್.. ಈ ಕೇಸ್ ಏನಾಯಿತು ಅಂತ ಹೇಳಿದರೆ ಮಾತ್ರ ಕೇಕು" ಅಂತ ತುಸು ಮುನಿಸಿನಿಂದಲೇ ಹೇಳಿದರು.. 

"ಆಗಲಿ ಮೇಡಂ.. ನೋಡಿ ಹೀಗಿದೆ.. ರೀ ಸಂಜನಾ ಮೀನಾ ಮೇಡಂ.. ನೀವು ಕೇಳಿಸಿಕೊಳ್ಳಿ.. ನಿಮ್ಮದೇ ಕೇಸ್ ಇದು.. "

ಎಲ್ಲರೂ ಮೈಯೆಲ್ಲಾ ಕಿವಿಯಾಗಿ.... ಇನ್ಸ್ಪೆಕ್ಟರ್ ಹೇಳುವ ಮಾತಿಗೆ ಕಿವಿಗೊಟ್ಟರು.. 

"ನೋಡಿ ಮೇಡಂ.. ಮೀನಾ ಮೇಡಂ.. ನಿಮ್ಮಿಂದ ಪರ್ಸ್ ಕದ್ದ ಆತನ ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಿ.. ಒಂದಷ್ಟು ವಿಚಾರಣೆ ಮಾಡಿದ ಮೇಲೆ ತಿಳಿದು ಬಂದ ವಿಷಯ.. .... ಆತ ಪರ್ಸ್ ಕದ್ದು ತನ್ನ ಅಡ್ಡ ಕಡೆ ಹೋಗುವಾಗ.. ತನ್ನ ನಾಯಕನ ಕರೆ ಬಂದಿತ್ತು..  ಅರ್ಜೆಂಟ್ ಆಗಿ ಒಂದು ಡೀಲ್ ಇದೆ ಅದನ್ನು ಮುಗಿಸು ಅಂತ.. ಆದರೆ ಈತನಿಗೆ ಅಂದು ಬೇರೆ ಯಾವ ಕೆಲಸ ಮಾಡುವ ಮೂಡ್ಇರಲಿಲ್ಲ .. ಈ ರೀತಿಯ ಜೀವನ ಸಾಕಾಗಿತ್ತು.. ಸರ್ ಇವತ್ತೊಂದು ದಿನ ನನ್ನ ಬಿಟ್ಟು ಬಿಡಿ.. ನಾಳೆ ನಾನೇ ಬರ್ತೀನಿ.. ನಿಮಗೆ ಎಲ್ಲಾ ಹೇಳಿ ನನ್ನ ಊರಿಗೆ ಹೋಗುತ್ತೇನೆ.. ಈ ಲಾಕ್ ಡೌನ್ ಇಂದ ನಮ್ಮ ಊರಲ್ಲಿ ಹೊಲ ಗದ್ದೆ ಜಮೀನು ನೋಡುವವರಿಲ್ಲ.. ಅಪ್ಪ ಅಮ್ಮನನ್ನು ನೋಡಿಕೊಳ್ಳಬೇಕು.. ಯಾವುದೋ ಕೆಟ್ಟ ಘಳಿಗೆ.. ಬೆಂಗಳೂರಿಗೆ ಬಂದು.. ನಿಮ್ಮ ಜಾಲ ಸೇರಿಕೊಂಡು ಮಾಡಬಾರದ ಕೆಲಸ ಮಾಡಿದೆ ..ಈ ಜಂಜಾಟದ ಬದುಕು ಸಾಕಾಗಿದೆ.. ಅಂತ ಹೇಳಿದ.. ಸಾಮಾನ್ಯ ಈ ರೀತಿಯ ಕೋರಿಕೆಗಳನ್ನು ಈ ರೀತಿಯ ತಂಡಗಳ ಬಾಸ್ ಗಳು ಒಪ್ಪುವುದು ಕಷ್ಟ.. ಮತ್ತು ಸಾಧ್ಯವೂ ಇಲ್ಲ.. ಆದರೆ.. ಅದೇನೋ ಈತನ ಒಳ್ಳೆಯ ತನವೋ.. ಕರುಣೆಯೂ, ಅನುಕಂಪವೋ.. ಅಥವ ತಾನೂ ಇದೆ ರೀತಿ ಹಾದಿಯನ್ನು ತುಳಿದಿದ್ದು ನೆನಪಿಗೆ ಬಂತೋ.. ಒಟ್ಟಿನಲ್ಲಿ .. ಸರಿ.. ಇವತ್ತೊಂದು ಪುಟ್ಟ ಡೀಲ್ ಇದೆ.. ಅದನ್ನು ಮುಗಿಸಿ.. ಹೊರಟು ಬಿಡು.. ಮತ್ತೆ ನಿನ್ನ ಮುಖ ನನಗೆ ತೋರಿಸಬೇಡ.. ಶುಭವಾಗಲಿ ಅಂತ ಫೋನ್ ಇಟ್ಟಿದ್ದಾನೆ.. 

ಇದೆ ಖುಷಿಯಲ್ಲಿ, ತನ್ನ ಬಾಸ್ ತನ್ನನ್ನು ಬಿಡುಗಡೆ ಮಾಡಿದ ಎಂಬ ಖುಷಿಯಲ್ಲಿ, ಬಾಡಿಗೆ ಸ್ಕೂಟರ್ ತೆಗೆದುಕೊಂಡು.. ತನ್ನ ಗೆಳತಿಯ ಮನೆಗೆ ಹೊರಟ.. ಮೆಲ್ಲಗೆ ಮಳೆ ಶುರುವಾಗಿತ್ತು.. ಆದರೆ ಮುಂದಿನ ಸುಂದರ ಬದುಕು ನೆನೆಸಿಕೊಂಡು ಹೋಗುತ್ತಿದ್ದ ಅವನಿಗೆ.. ಮಳೆ ಕಾಡಿರಲಿಲ್ಲ.. ಇನ್ನೇನೂ ಆವನು ಮತ್ತು  ಗೆಳತಿ ಸೇರುವ ಜಾಗ ಬರುವಹೊತ್ತಾಗಿತ್ತು .. ಅಷ್ಟರಲ್ಲಿ ಹಿಂದೆ ಒಂದು ಡೀಲ್ ನಲ್ಲಿ ಪುಟ್ಟ ಜಗಳವಾಗಿದ್ದ ಒಬ್ಬ ಅವನಿಗೆ ಅಡ್ಡ ಬಂದ... 

ಸಾಮಾನ್ಯ.. ಮಾಮೂಲಿ ದಿನವಾಗಿದ್ದರೆ ಅಲ್ಲೊಂದು ಹೊಡೆದಾಟ ನೆಡೆಯಬೇಕಿತ್ತು.. ಆದರೆ.. ಗ್ಯಾಂಗ್ ಬಿಟ್ಟು ಹೋಗುವ ಹಾದಿಯಲ್ಲಿದ್ದ ಈತನಿಗೆ.. ಯಾವುದು ಬೇಡವಾಗಿತ್ತು.. ಏನ್ಲಾ ಮಗ ಹೇಗಿದ್ದೀಯೋ ಅಂತ ಆರಾಮಾಗೆ ಮಾತಾಡಿಸಿದ.. ಆದರೆ ಆ ಕಡೆ ವ್ಯಕ್ತಿ.. ಅದು ತನಗೆ ಬೇಡದ ವಿಷಯ ಎನ್ನುವಂತೆ.. ಸೀದಾ ಹೊಡೆದಾಟಕ್ಕೆ ಇಳಿದ.. ಇಬ್ಬರಿಗೂ ಒಂದಷ್ಟು ಹೊತ್ತು ಹೊಡೆದಾಟವಾಯಿತು.. ಆ ಹುಡುಗ.. ಈತನ ಬ್ಯಾಗ್ ಕಿತ್ತುಕೊಂಡು.. ಅದರೊಳಗೆ ಇದ್ದ ವಸ್ತುವನ್ನು ಹುಡುಕತೊಡಗಿದ.. ತನಗೆ ಬೇಕಾದ್ದು ಏನೂ ಸಿಗಲಿಲ್ಲ.. ಆದರೆ ಬ್ಯಾಗ್ ಗಮನ ಸೆಳೆಯಿತು.. ಬ್ಯಾಗ್ ಮಾತ್ರ ಸಾಕು ಅಂತ.. ಅದರೊಳಗಿದ್ದ ವಸ್ತುಗಳೆನ್ನೆಲ್ಲ ಕೆಳಗೆ ಬಿಸಾಕಿ.. ತನ್ನ ಜೋಬಿನಲ್ಲಿದ್ದ ಕೆಲವು, ಕಾರ್ಡುಗಳು, ತನ್ನ ಗೆಳೆತಿಯ ಅಲಂಕಾರಿಕ ಸಾಮಗ್ರಿಗಳನ್ನು ಹಾಕಿ.. ಓಡಿ ಹೋಗೋಕೆ ಹೊರಟ.. ಮೊದಲೇ ಬ್ಯಾಗ್ ಕದ್ದಿದ್ದ ಹುಡುಗ.. ಆ ಬ್ಯಾಗ್ ತನಗೆ ಬೇಕು ಎಂದು.. ಅವನ ಹಿಂದೆ ಓಡಿಸಿಕೊಂಡು ಹೋದ.. ಅಲ್ಲೇ ಹತ್ತಿರದಲ್ಲಿಯೇ ಸಾಲು ಸಾಲು ಮರಗಳ ರಸ್ತೆ.. ಅಕ್ಕ ಪಕ್ಕ ಹುಲ್ಲು ಬೆಳೆದು ಈ ಕಡೆ ಪಾರ್ಕ್ ಅಲ್ಲ.. ಆ ಕಡೆ ರಸ್ತೆಯಲ್ಲ ಎನ್ನುವ ಹಾಗೆ ಇತ್ತು.. ಇಬ್ಬರಿಗೂ ಮತ್ತೆ ಒಂದಷ್ಟು ಹೊಡೆದಾಟವಾದ ಮೇಲೆ..  ಅವರಿಬ್ಬರ ಒಬ್ಬರ ಮೇಲೆ ಒಬ್ಬರ ಸಿಟ್ಟಿಗಿಂತ ಆ ಬ್ಯಾಗಿನ ಮೇಲೆ ಪ್ರೀತಿಯಾಗಿ ಅದನ್ನು ಜಗ್ಗಾಡ ತೊಡಗಿದರು. ಆ ಬರದಲ್ಲಿ ಮೊದಲು ಬ್ಯಾಗ್ ಕದ್ದವ ಕಲ್ಲನ್ನು ಎಡವಿ ಬಿದ್ದೆ ಬಿಟ್ಟ.. ಅವನ ತಲೆ ಅಲ್ಲಿದ್ದ ಒಂದು ಕಲ್ಲಿಗೆ ಬಲವಾಗಿಯೇ ಬಡಿದ ಕಾರಣ ಪ್ರಜ್ಞೆ ತಪ್ಪಿ ಬಿದ್ದ... ಮೆಲ್ಲನೆ ಮಳೆ ಸುರಿಯುತಿತ್ತು.. ಆ ಸಮಯದಲ್ಲಿ ಒಂದು ಪೊಲೀಸ್ ಜೀಪ್ ಹೋಗಿದ್ದರಿಂದ.. ಗಾಬರಿಯಾಗಿ ಇನ್ನೊಬ್ಬಾತ ಓಡಿ ಹೋಗಿದ್ದ 

ಈ ರೀತಿಯ ಹೊಡೆದಾಟದಲ್ಲಿ ಈ ರೀತಿಯ ದೃಶ್ಯಗಳು ಮಾಮೂಲಿಯಾಗಿದ್ದರೂ ಇನ್ನೊಬ್ಬನಿಗೆ ಯಾಕೋ ಗಾಬರಿಯಾಗಿ ಓಡಿ ಹೋದ.. .. ಪ್ರಜ್ಞೆ ತಪ್ಪಿ ಬಿದ್ದವನನ್ನು ಆಸ್ಪತ್ರೆಗೆ ಸೇರಿಸಿದ್ದರಂತೆ.. ಆದರೆ ಆತನಿಗೆ ಜ್ಞಾಪಕ ಶಕ್ತಿ ಹೋಗಿದ್ದರಿಂದ.. ಈ ಕೇಸು ಫೈಲಿನಲ್ಲಿಯೇ ಕೊಳೆಯುತಿತ್ತು.. ಇವತ್ತು ಮತ್ತೆ ಫೈಲ್ ಹಿಡಿದು ನೋಡೋಕೆ ಶುರು ಮಾಡಿದೆ.. ಎಲ್ಲವೂ ಹೊರಗೆ ಬಂತು.. ಈ ಕೇಸು ಖುಲಾಸೆ ಆಯ್ತು..

ಮೀನಾ ಮೇಡಂ.. ಬ್ಯಾಗ್ ನಿಮ್ಮದೇ.. ಆದರೆ ಬ್ಯಾಗಿನೊಳಗೆ ಇದ್ದ ಸಾಮಗ್ರಿಗಳು, ಡೆಬಿಟ್ ಕಾರ್ಡ್, ಎಲ್ಲವನ್ನು ನಾನು ಪರೀಕ್ಷೆ ಮಾಡಿಸಿದ್ದೆ ಆದರೆ.. ಈ ಕೊರೊನಾ ತಲೆ ಬಿಸಿ.. ಎಲ್ಲವನ್ನು ನನ್ನ ತಲೆಯಿಂದ ಮೇರ್ ಮಾಡಿತ್ತು.. ಇವತ್ತು ಬೆಳಗಿನ ವಾಟ್ಸಾಪ್ ಸಂದೇಶ ಮತ್ತೆ ನನ್ನ ತಲೆಗೆ ಚುರುಕು ಮುಟ್ಟಿಸಿತು.. ಹಾಗಾಗಿ  ಇನ್ನು ನಿಮಗೆ ತೊಂದರೆ ಇಲ್ಲ.. ನಿಮಗೆ ಬಿಡುವಾದಾಗ.. ಬ್ಯಾಗ್ ತೆಗೆದುಕೊಂಡು ಒಂದು ಪಾತ್ರ ಬರೆದು ಕೊಡಿ.. ಈ ಬ್ಯಾಗ್ ನನ್ನದೇ ಅಂತ.. ನಾನು ಈ ಕೇಸ್ ಕ್ಲೋಸ್ ಮಾಡ್ತೀನಿ.. 

ಮೀನಾ "ತುಂಬಾ ಸಂತೋಷ ಆಯ್ತು ಸರ್.. ಅಂದ ಹಾಗೆ ನನ್ನ ಬ್ಯಾಗ್ ಕದ್ದವ ಹೇಗಿದ್ದಾನೆ.. ಅವನ ಜೊತೆ ಜಗಳವಾಡಿದವನ ಕತೆ ಏನು"

"ಮೇಡಂ.. ಬ್ಯಾಗ್ ಕದ್ದವನಿಗೆ ಜ್ಞಾಪಕ ಬಂದಿಲ್ಲ.. ಒಂದು ಹಾಸ್ಟೆಲ್ ನಲ್ಲಿ ಬಿಟ್ಟಿದ್ದೀನಿ.. ಅವನನ್ನು ಊರಿಗೆ ತಲುಪಿಸುವ ಕೆಲಸ ಮಾಡುತ್ತೇನೆ.. ಅವನ ಅಪ್ಪ ಅಮ್ಮನಿಗೆ ವಿಷಯ ಹೇಳಿದ್ದೀನಿ.. ವರ್ಷಕ್ಕೆ ಒಂದೆರಡು ಬಾರಿ ಹೋಗುತ್ತಿದ್ದರಿಂದ.. ಅವರೂ ಇವನ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ.. ಇನ್ನೂ ಜಗಳವಾಡಿದ ಹುಡುಗನ ಗೆಳತಿಯನ್ನು ಹುಡುಕಿ ಆಕೆಗೆ ಪರ್ಸನಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಕೊಡುವ ವ್ಯವಸ್ಥೆ ಮಾಡಿದ್ದೇನೆ.. ಆಕೆಯ ಗೆಳೆಯ.. ಊರಿಗೆ ಹೋಗಿದ್ದಾನೆ.. ಮತ್ತೆ ಈ ಹೊಡೆದಾಟ ಬಡಿದಾಟ ಎಲ್ಲಾ ಬಿಟ್ಟಿದ್ದಾನೆ ಅಂತ ಕೇಳಿ ಪಟ್ಟೆ.. ಹೇಗೋ ಎಲ್ಲವೂ ಸುಖಾಂತ್ಯವಾದರೆ ಸಾಕು.. "

"ಸರ್... ಕೇಕು ಕಟ್ ಮಾಡ್ತೀನಿ ಬನ್ನಿ"  ರೂಪ ಅವರ ಧ್ವನಿ ಕೇಳಿ ಇತ್ತ ತಿರುಗಿದ ಇನ್ಸ್ಪೆಕ್ಟರ್.. 

ಕಾನ್ಸ್ಟೇಬಲ್ತಾ ಶರಣಪ್ಪನಿಗೆ ಕಣ್ಣು ಸನ್ನೆ ಮಾಡಿ ತಾನು ತಂದಿದ್ದ ಕೇಕು ತರುವಂತೆ ಹೇಳಿದ .. 

ಎರಡು ಕೇಕು.. 




ಎಲ್ಲರೂ ಸಂಭ್ರಮದಿಂದ ರೂಪ ಸತೀಶ್ ಅವರ ಜನುಮದಿನವನ್ನು ಆಚರಿಸಿದರು..

ಎಂಬಲ್ಲಿಗೆ ಈ ಕಥಾ ಪ್ರಸಂಗ ಮಂಗಳಮಯವಾಯಿತು..!

DFR ಜನುಮದಿನದ ಶುಭಾಶಯಗಳು!

Thursday, May 7, 2020

DFR.. The inspiring personality!

ಗಾಬರಿಯಿಂದ ಬಡ ಬಡ ಅಂತ ಬಾಗಿಲು ಬಡಿಯುತ್ತಿದ್ದಳು.. ಸೆಕ್ಯೂರಿಟಿ ಕಣ್ಣುಜ್ಜಿಕೊಂಡು.. 

:ಯಾರಮ್ಮ, ಏನಮ್ಮ.. ಯಾಕಮ್ಮ "

ವಿಚಿತ್ರವಾದರೂ ಕೇಳಿದ ಪ್ರಶ್ನೆಗಳೆಲ್ಲಾ ಆ ಹೊತ್ತಿಗೆ  ಸರಿ ಇತ್ತು.. 

"@#@#@#@#@# ನಂಬರ್ ಗೆ ಫೋನ್ ಮಾಡಿ.. ಅವರನ್ನ ಅರ್ಜೆಂಟಾಗಿ ನೋಡಬೇಕಿತ್ತು.." 

"ಮೋ.. ಈಗ ಘಂಟೆ ನೋಡಿದ್ದೀರಾ.. ಆಗಲೇ ಮಧ್ಯ ರಾತ್ರಿ ಎರಡು ಘಂಟೆ.. ಇಷ್ಟು ಹೊತ್ತಿನಲ್ಲಿ ಯಾರಮ್ಮ.. ಏನಮ್ಮ.. ಯಾಕಮ್ಮ"

"ಸರ್ ... ನನ್ನ  ಕತೆ ಈಗ ನಿಮಗೆ ಹೇಳೋಕೆ ಆಗಲ್ಲ..  ಅವರನ್ನು ಕರೆಯಿರಿ.. ನನ್ನನ್ನ ಒಳಗೇನು ಬಿಡಬೇಡಿ.. ನನ್ನ ಮೊಬೈಲ್ ಕರೆನ್ಸಿ ಖಾಲಿಯಾಗಿದೆ"

ಗೊಣಗಿಕೊಂಡೆ.. ಹಚ್ಚಿದ್ದ ಬೀಡಿಯನ್ನು ಬಿಸಾಕಿ.. ಇಂಟೆರ್ ಕಾಮ್ ಫೋನ್ ತೆಗೆದುಕೊಂಡು ಮೂರು ನಂಬರ್ ಒತ್ತಿದ.. ಒಂದಷ್ಟು ಹೇಳಿದ.. ಹೆಸರನ್ನು ಹೇಳಿದ.. 

"ಸರಿ ಕಣಮ್ಮ .. ಹತ್ತು ನಿಮಿಷ ಬರ್ತಾರಂತೆ.. ಇಲ್ಲಿಯೇ ಕೂತುಕೊಳ್ಳಿ.. ಹೊರಗೆ ವಿಪರೀತ ಚಳಿ ಇದೆ"... ಮೇ ತಿಂಗಳಾಗಿದ್ದರೂ ಕಳೆದ ಕೆಲವು ದಿನಗಳ ಮಳೆ ವಾಣಿಜ್ಯ ನಗರಿಯನ್ನು ಚಳಿಯ  ಕಡಲಿಗೆ ದೂಡಿತ್ತು.. 

"ಯಸ್.. ಹಾಯ್.. ಏನು ಮೇಡಂ ನೀವು ಈ ಹೊತ್ತಿನಲ್ಲಿ.. ಏನಾಯ್ತು"

ಬಂದಾಕೆ ಹಾಗೆ ಅಳುತ್ತಾ.. ಇವರನ್ನು ಹಗ್ ಮಾಡಿ.. "ಬನ್ನಿ ನನ್ನ ಜೊತೆ ಹೇಳುತ್ತೇನೆ.. "

"ಓಹ್.. ಸರಿ.. ಒಂದು ಹತ್ತು ನಿಮಿಷ... ಮನೇಲಿ ಹೇಳಿ... ಕಾರು ತೆಗೆದು ಬರುತ್ತೀನಿ.. "

"ಮೇಡಂ.. ಕಾರು ನನ್ನದೇ ಇದೆ.. ಇಲ್ಲಿಂದಲೇ ಕರೆ ಮಾಡಿ..  " ಎನ್ನುತ್ತಾ ಸೆಕ್ಯುರಿಟಿಯ ಫೋನ್ ಕಿತ್ತುಕೊಂಡು.. "ರೀ.. ಮನೇಲಿ ಇಷ್ಟು ಹೊತ್ತಿಗೆ ಮಲಗಿರ್ತಾರೆ.. ಇಂಟೆರ್ ಕಾಂ ಕರೆ ಸರಿ ಹೋಗಲ್ಲ." ಎಂದು ಹೇಳಿ.. ಫೋನಿನಲ್ಲಿ ವಿಷಯ ಹೇಳೋಕೆ ಸಿದ್ಧ ಮಾಡಿ.. ಅವರನ್ನು ಅಕ್ಷರಶಃ ತೋಳು ಹಿಡಿದುಕೊಂಡೆ ತಮ್ಮ ಕಾರಿನತ್ತ ಕರೆದೊಯ್ದರು.. 

ಮುಂದಿನ ಹತ್ತು ನಿಮಿಷ.. ಇಬ್ಬರೂ ಕಾರಲ್ಲಿ ಹೊರಟರು.. 

ಕಣ್ಣು ಒರೆಸಿಕೊಳ್ಳುತ್ತಲೇ ಆಕೆ ಡ್ರೈವ್ ಮಾಡುತ್ತಿದ್ದಳು.. ವಿಷಯ ಬರಲಿ ಅಂತ ಈಕೆಯೂ ಆ ಕತ್ತಲಿನ ರಸ್ತೆಯನ್ನು ನೋಡುತ್ತಾ ಕುಳಿತಿದ್ದರು.. 

ಸುಮಾರು ಒಂದು ಘಂಟೆ ಡ್ರೈವ್ ಆದ ಮೇಲೆ.. ಊರಿನ ಆಚೆ ಇದ್ದ ದೊಡ್ಡ ಬಂಗಲೆಯ ಒಳಗೆ ನುಗ್ಗಿತು.. 

"ಬನ್ನಿ ಮೇಡಂ.. ಸಾರಿ ಏನು ಮಾತಾಡಲಿಲ್ಲ.. ಬೇಸರ ಬೇಡ.. ಬನ್ನಿ ಒಳಗೆ.. "

ಸದಾ ಶಾಂತ ಮೂರ್ತಿಯಾಗಿದ್ದ ಇವರಿಗೆ ಕೋಪ ಬಂದರೂ ಒಳಗೆ ನುಂಗಿಕೊಂಡು .. ಏನೋ ವಿಷಯ ಇದೆ.. ಇಲ್ಲದೆ ಇದ್ದರೇ ಈ ರೀತಿ ಇಷ್ಟು ಹೊತ್ತಿಗೆ ಕರೆಯುತ್ತಿರಲಿಲ್ಲ ಎಂದು  ಆಕೆಯ ಬಗ್ಗೆ ಗೊತ್ತಿದ್ದರಿಂದ ಸುಮ್ಮನೆ ಒಳನೆಡೆದರು. 

ಒಳಗೆ ಹೋದರೆ.. ಇವರಿಗಿಷ್ಟವಾದ ಬಿಸಿ ಬಿಸಿ ಸ್ಟ್ರಾಂಗ್  ಕಾಫೀ ಕೊಟ್ಟರು... 

ಸರಿ ಬಂದದ್ದು ಆಗಿದೆ.. ಆಗಿದ್ದು ಆಗಲಿ ಅಂತ ಬಿಸಿ ಬಿಸಿ ಕಾಫೀ ಕುಡಿದಾಗ.ಆ ತಣ್ಣನೆಯ ವಾತಾವರಣಕ್ಕೆ ಕಾಫೀ ಅಮೃತವಾಗಿತ್ತು.. !

"ಮೇಡಂ.... ಇವಳು ನನ್ನ ತಂಗಿ ಮೀನಾ.. ಇವಳು ಆಫೀಸ್ ಇಂದ ಮನೆಗೆ ಬರುವಾಗ .. ಯಾರೋ ಇವಳ ಹತ್ತಿರ ಬಂದು ಪರ್ಸ್ ಕಿತ್ತುಕೊಂಡು ಹೋಗಿದ್ದರು.. ಇವಳು ಪೊಲೀಸ್ ಸ್ಟೇಶನ್ನಿಗೆ ಹೋದರೆ ಸುಮ್ಮನೆ ಗೋಳಾಡಿಸುತ್ತಾರೆ ಅಂತ ಹೋಗಿಲ್ಲ.. ಈಗ ಸಂಜೆ.. ಪೊಲೀಸ್ ಸ್ಟೇಷನಿಂದ ಕರೆ ಬಂದಿತ್ತು.. ನಿಮ್ಮ ವಸ್ತುಗಳು ಒಂದು   ಮರದ ಹತ್ತಿರ ಬಿದ್ದಿತ್ತು.. ಅದರ ಪಕ್ಕ ಮಳೆಯಲ್ಲಿ ನೆಂದು ತೊಪ್ಪೆಯಾಗಿದ್ದ ವ್ಯಕ್ತಿಯೂ ಬಿದ್ದಿದ್ದನು .. ನೀವು ಕೂಡಲೇ ನಿಮ್ಮ ಮನೆ ಹತ್ತಿರ ಇರುವ ಸ್ಟೇಷನಿಗೆ ಬನ್ನಿ.. ಅಂತ ಹೇಳಿದರು. ನಮಗೆ ಏನೂ ತೋಚದೆ.. ನಿಮ್ಮ ನೆನಪು ಬಂತು.. ಅದಕ್ಕೆ ಕಷ್ಟವಾದರೂ ಸರಿ.. ದೂರವಾದರೂ ಸರಿ ಎಂದು ಈ ಅವೇಳೆಯಲ್ಲಿ ಬಂದೆ.. ಸಾರಿ ಮೇಡಂ.. ನಮಗೆ ನೀವೇ ದಾರಿ ತೋರಿಸಬೇಕು.. ನಮಗೆ ಪೊಲೀಸ್ ಸ್ಟೇಷನ್, ಪೊಲೀಸು ಅಂದ್ರೆ ಭಯ.. ಅದಕ್ಕೆ  ನನ್ನ ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಪ್ಪ, ಅಜ್ಜ ಅಜ್ಜಿ  ಚಿಂತೆಯಿಂದ ನಿದ್ದೆ ಮಾಡಿಯೇ ಇಲ್ಲ.. ನೋಡಿ ನೋಡಿ ಎಲ್ಲರೂ ನಿಮ್ಮನ್ನೇ ಕಾಯುತ್ತಿದ್ದಾರೆ.." ಅಂದದ್ದೇ ತಡ.. ರೂಮಿನಲ್ಲಿದ್ದ ಒಂದು ಕುಟುಂಬವೇ ಹಾಲಿಗೆ ಬಂದು ಕೈ ಮುಗಿದವು ಇವರಿಗೆ..

ಕಾಫೀ ಮುಗಿದಿತ್ತು .. ಕಾಫೀ ಪ್ರಿಯೆ ಆಗಿದ್ದ ಇವರಿಗೆ ತನಗೆ ಪರಿಚಯವಿದ್ದ ಸಂಜನಾ ಹೇಳಿದ್ದು ಕೇಳುತ್ತ ಇದ್ದದ್ದರಿಂದ ಕಾಫೀ ರುಚಿ ಹತ್ತಿರಲಿಲ್ಲ.. "ಸಂಜನಾ.. ಇನ್ನೊಂದು ಕಪ್ ಕಾಫೀ ಹೇಳಿ.. ಸ್ವಲ್ಪ ಯೋಚಿಸೋಕೆ ಸಮಯಕೊಡಿ" ಎನ್ನುತ್ತಾ  ಹೊರಗೆ ಬಂದರು.. ತಂಪಾದ ಗಾಳಿ ಚಳಿಯನ್ನು ಹೊತ್ತು ತರುತ್ತಿದ್ದರೂ .. ಈ ಅವೇಳೆಯಲ್ಲಿ ಈ ರೀತಿಯ ವಿಚಿತ್ರ ಪ್ರಸಂಗ.. ಚಳಿಯನ್ನು ಹೊರದೂಡಿತ್ತು.. ಜೊತೆಗೆ ತನಗಿಷ್ಟವಾದ ಜಾಕೆಟ್, ಗ್ಲೌಸ್, ಟೋಪಿ ಚಳಿಯನ್ನು ತಡೆಯಲು ಸಹಾಯ ಮಾಡಿತ್ತು.. 

ಕಾಫಿ ಬಂತು.. ಕುಡಿದ ಮೇಲೆ ಹೊಸ ಚೈತನ್ಯ ಬಂತು.. "ಮೀನಾ ಗಾಬರಿ ಬೇಡ.. ಬನ್ನಿ.. ಸಂಜನಾ ನಿಮ್ಮ ಕಾರನ್ನು ನಾನೇ ಡ್ರೈವ್ ಮಾಡುತ್ತೇನೆ. ನಡೀರಿ ಹೋಗೋಣ .. ಎನ್ನುತ್ತಾ ಮನೆಯವರಿಗೆ ಧೈರ್ಯ ಹೇಳಿ.  ಬೇಗ ಬರುತ್ತೇವೆ.. ಯೋಚಿಸಬೇಡಿ ಎಂದು ಹೇಳಿ  ಹೆಬ್ಬೆರಳನ್ನು ತೋರಿಸುತ್ತಾ ಹೊರಗೆ ಬಂದರು.. 

"ಅಮ್ಮ ಮೇಡಂ ಇದ್ದಾರೆ.. ಎಲ್ಲವನ್ನು ನೋಡಿಕೊಳ್ತಾರೆ.. ಯೋಚಿಸಬೇಡಿ. .. ನನಗೂ ಅವರದ್ದೇ ಧೈರ್ಯ .. ಅದಕ್ಕೆ ಕರೆದುಕೊಂಡು ಬಂದಿದ್ದು". ಎನ್ನುತ್ತಾ ಬಾಗಿಲನ್ನು ಎಳೆದುಕೊಂಡು ಲಾಕ್ ಮಾಡಿಕೊಂಡು ಹೊರಟಳು ..  ಸಂಜನಾ.. 

ಮೀನಾ ಸಂಜನಾ ಕಾರಿನಲ್ಲಿ ಕೂತರು.. ಇವರು ಡ್ರೈವ್ ಮಾಡುತ್ತಾ ಹತ್ತಿರದಲ್ಲಿಯೇ ಇದ್ದ ಪೊಲೀಸ್ ಸ್ಟೇಷನಿಗೆ ಬಂದರು.. 

"ನಮಸ್ಕಾರ ಮೇಡಂ.. ಇದೇನಿದು ಇಷ್ಟು ಹೊತ್ತಲ್ಲಿ.. " ಅಚ್ಚರಿಯ ದನಿಯಲ್ಲಿ ಕಾನ್ಸ್ಟೇಬಲ್ ಶರಣಪ್ಪ ಕೇಳಿದರು.. 

"ನಮಸ್ಕಾರ ಶರಣಪ್ಪ ಸಾಹೇಬ್ರು ಇದ್ದಾರಾ?"

"ಇದ್ದಾರೆ ಮೇಡಂ.. ಒಳಗೆ ಹೋಗಿ.. ಯಾವುದೋ ಕೇಸು ಸ್ವಲ್ಪ ತಲೆ ಬಿಸಿ ಮಾಡ್ಕೊಂಡಿದ್ದಾರೆ"

ಒಳಗೆ ಬಂದು.."ನಮಸ್ಕಾರ ಸರ್" 

ಸಿಗರೇಟು ಸೇದುತ್ತಾ ಯಾವುದೊ ಫೈಲ್ ನಲ್ಲಿ ಮುಳುಗಿದ್ದ ಇನ್ಸ್ಪೆಕ್ಟರ್ ದನಿ ಬಂದತ್ತ ತಿರುಗಿ "ಓಹ್ ಓಹೋ ನಮಸ್ಕಾರ ಮೇಡಂ.. ಏನಿದು ಆಶ್ಚರ್ಯ ಇಷ್ಟು ಹೊತ್ತಿನಲ್ಲಿ.. ಬನ್ನಿ ಬನ್ನಿ ಕುಳಿತುಕೊಳ್ಳಿ" ಎಂದು ಕುರ್ಚಿತೋರಿಸಿ "ಸಾರಿ ಮೇಡಂ.. ರಾತ್ರಿ ಹೊತ್ತು ಈ ಚಳಿ.. ಜೊತೆಗೆ ಈ ಹಾಳಾದ ಕೇಸುಗಳು ತಲೆ ಕೆಡಿಸುತ್ತವೆ.. ಇದಿಲ್ಲ ಅಂದರೆ ತಲೆ ಓಡೋಲ್ಲ " ಎನ್ನುತ್ತಾ ಸಿಗರೇಟ್ ಆಶ್ ಟ್ರೆಗೆ ಹಾಕಿ "ಹೇಳಿ ಮೇಡಂ ಬಂದ ವಿಚಾರ"

"ನಮಸ್ಕಾರ ಸರ್.. ಇವರು ನನ್ನ ಆತ್ಮೀಯ ಗೆಳತೀ.. ನಿಮ್ಮ ಸ್ಟೇಷನಿಂದ ಕರೆ ಮಾಡಿದ್ದರಂತೆ.. ಇವರಿಗೆ ಪೊಲೀಸ್ ಅಂದರೆ ಹೆದರಿಕೆ.. ಅದಕ್ಕೆ ಸಹಾಯ ಮಾಡೋಣ ಅಂತ ಬಂದೆ.. "

"ಏನ್ ಮೇಡಂ ನಾವೇನೂ ರಾಕ್ಷಸರ.. ಇವರನ್ನು ತಿಂದು ಬಿಡ್ತೀವಾ..  ನಮಗೂ ಅಕ್ಕ ತಂಗಿಯರು ಇದ್ದಾರೆ ಮೇಡಂ" ಜೋರಾಗಿ ನಗುತ್ತ.. "ಮೀನಾ ಮೇಡಂ ಅಂದರೆ ಯಾರು? .. ಈ ಕಡೆ ಬನ್ನಿ ನಿಮ್ಮ ಪರ್ಸ್ ನೋಡಿ.. ನಿಮ್ಮದೇನಾ ಹೇಳಿ"

ಮೀನಾ ಹೆದರುತ್ತಲೇ.. ಬಂದು.. ಪುರ್ಸ್ ಮುಟ್ಟದೆ.. ಅದನ್ನು ನೋಡಿ.. ಸರ್.. ಇದು ನನ್ನದಲ್ಲ.. "

ಅಚ್ಚರಿಗೊಂಡ ಇನ್ಸ್ಪೆಕ್ಟರ್.. "ನಿಮ್ಮ ಹೆಸರಿದೆ ಮೇಡಂ ನೋಡಿ".. 

ಆಗ ಇವರು ಎದ್ದು.. " ಏನ್ ಸರ್. ನಾ ನೋಡಬಹುದೇ.. ಅವರಿಗೆ ಇನ್ನೂ ಹೆದರಿಕೆ ಹೋಗಿಲ್ಲ" 

"ಬನ್ನಿ ಮೇಡಂ.. ನೋಡಿ ಪರವಾಗಿಲ್ಲ.. ಫಿಂಗರ್ ಪ್ರಿಂಟ್ಸ್  ತರಲೆ ಏನೂ ಇಲ್ಲ.. ನೋಡಿ ಪರವಾಗಿಲ್ಲ.. .. ರೀ ಶರಣಪ್ಪ. ಒಂದು ಆರು ಸ್ಟ್ರಾಂಗ್ ಕಾಫೀ ತರಿಸ್ರಿ.. ಈ ಮೇಡಂಗೆ ಸ್ಟ್ರಾಂಗ್ ಕಾಫೀ ಅಂದ್ರೆ ತುಂಬಾ ಇಷ್ಟ" 
ಮೇಡಂ ಕಡೆ ನೋಡಿ ನಕ್ಕರು.. 

"ಸರ್ ನೀವು ಸರಿ ಇದ್ದೀರಾ " ಎನ್ನುತ್ತಾ.. ಬ್ಯಾಗ್ ತೆಗೆದುಕೊಂಡು "ಮೀನಾ ನೋಡಿ.. ನಿಮ್ಮದೇನಾ ಅಂತ"

ಬ್ಯಾಗಿನಲ್ಲಿದ್ದ ಒಂದೊಂದೇ ವಸ್ತುವನ್ನು ತೆಗೆದು ನೋಡಿದರು.. ಕ್ರೆಡಿಟ್ ಕಾರ್ಡ್, ಮೊಬೈಲ್, ಡೆಬಿಟ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಲಿಪ್ಸ್ಟಿಕ್, ಬಾಚಣಿಗೆ, ಐ ಲೈನರ್, ಹೇರ್ ಬ್ಯಾಂಡ್, ಎಲ್ಲವನ್ನೂ ನೋಡಿದ ಮೀನಾ. ಮೇಡಂ ಇದ್ಯಾವುದು ನನ್ನದಲ್ಲ.. ಆದರೆ  ಬ್ಯಾಗ್ ಮಾತ್ರ ನನದು.. ನೋಡಿ ಕಾರ್ಡುಗಳ ಮೇಲೆ ಇರೋ ಹೆಸರು ನೋಡಿ., ಅದು  ನನ್ನದಲ್ಲ.. " ಸ್ವಲ್ಪ ಧೈರ್ಯದಿಂದ ಮೀನಾ ಉತ್ತರಿಸಿದಳು.. 

"ಮೀನಾ ಸರಿ ನೀವು ಅಲ್ಲಿ ಕುಳಿತುಕೊಳ್ಳಿ.. ನಾ ಮಾತಾಡುತ್ತೇನೆ.. " 

ಮೀನಾ ಹೋಗಿ ಕೂತರು.. ಸಂಜನಾ.. ಮೀರಾಳ ಕೈಯನ್ನು ಅದುಮಿ.. ಮೇಡಂ ಇದ್ದಾರೆ ಏನೂ ತೊಂದರೆ ಇಲ್ಲ ಅನ್ನುವ ಲುಕ್ ಕೊಟ್ಟರು.. 

ಮೇಡಂ..  ಅಲ್ಲಿದ್ದ ಕಾನ್ಸ್ಟೇಬಲ್ ಅವರನ್ನು ಕೇಳಿದರು.. ನಿಮ್ಮ ಸಾಹೇಬ್ರು ಎಲ್ಲಿ? ಶರಣಪ್ಪ ಅವರು ಇಲ್ಲ.. " 

ಅವ ಸಾಹೇಬ್ರು ಸಿಗರೇಟು ಸೇದೋಕೆ ಹೊರಗೆ ಹೋಗಿದ್ದಾರೆ.. ಶರಣಪ್ಪ ಕಾಫೀ ತರೋಕೆ ಹೋಗಿದ್ದಾರೆ.. ಅಂದರು.. 

ಸ್ವಲ್ಪ ಹೊತ್ತಿಗೆ ಇನ್ಸ್ಪೆಕ್ಟರ್ ಬಂದ್ರು.. "ಏನು ಮೇಡಂ ಏನಾದರೂ ಗೊತ್ತಾಯ್ತಾ?"

"ಸರ್.. . ನೋಡಿ ಸರ್.. ಕಾರ್ಡ್, ಮೊಬೈಲ್ ಯಾವುದು ಇವರದ್ದಲ್ಲ.. ಬರಿ ಬ್ಯಾಗ್ ಮಾತ್ರ ಇವರದ್ದು ಅಂತ ಗುರುತಿಸಿದ್ದಾರೆ.. ನೋಡಿ ಸರ್ ಬೇರೆ ಏನೋ ತರಲೆ ಇರುತ್ತೆ.. ಇವರು ಈಗ ಹೋಗಬಹುದಲ್ವಾ.. ಪಾಪ ಸರ್.. ತುಂಬಾ ಒಳ್ಳೆಯ ಕುಟುಂಬ ಇವರದ್ದು.. "

ಅಷ್ಟರಲ್ಲಿ ಕಾಫೀ ಬಂತು.. 

ಆ ಚಳಿಗೆ ಸ್ಟ್ರಾಂಗ್ ಕಾಫೀ ಹೊಸ ಉತ್ಸಾಹ ಕೊಟ್ಟಿತು ... ಜೊತೆಗೆ ಇನ್ಸ್ಪೆಕ್ಟರ್ ಸಹಜವಾಗಿಯೇ ಕೂಲಾಗಿ ಮಾತಾಡಿದ್ದರಿಂದ ಸಂಜನಾ ಮತ್ತು ಮೀನಾಗೆ ತುಸು ಸಮಾಧಾನವಾಯಿತು.. ಅದಕ್ಕೆ ಮೇಲಾಗಿ ಬ್ಯಾಗ್ ಮಾತ್ರ ತನ್ನದು ಎನ್ನುವ ಅಂಶ ಇಬ್ಬರಿಗೂ ತುಸು ಧೈರ್ಯ ಕೊಟ್ಟಿತ್ತು.. 

"ಸರಿ ಮೇಡಂ. ನೀವು ಹೇಳೋದು ಸರಿ. ಈ ಬ್ಯಾಗ್  ಇಲ್ಲೇ ಇರಲಿ.. ನಾವು ವಿಚಾರಣೆ ಮಾಡಿ... ಮುಂದಿನ ಕ್ರಮದ ಬಗ್ಗೆ ಹೇಳ್ತೀವಿ.. ಮೇಡಂ ಅವರೇ ನಾವು ಹೇಳಿದಾಗ ನೀವು ಬರಬೇಕು.. ಮತ್ತೆ ನಮಗೆ ಹೇಳದೆ ಈ ಊರು ಬಿಟ್ಟು ಹೋಗಬಾರದು.. ಈ ಮೇಡಂ ನಿಮ್ಮ ಜೊತೆ ಬರೋದು ಬೇಡ.. ನೀವೇ  ಬಂದರೆ ಸಾಕು.. ಏನೂ ಹೆದರಿಕೆ ಬೇಡ.. " ಮೆಲ್ಲಗೆ ನಕ್ಕರು.. 

ತುಸು ನಿಟ್ಟುಸಿರು ಬಿಟ್ಟ ಸಂಜನಾ ಮತ್ತು ಮೀನಾ ಒಟ್ಟಿಗೆ "ಸರಿ ಸರ್.. ಹಾಗೆ ಆಗಲಿ"  ಎಂದರು.. 

ಈ ಮೇಡಂ "ಸರಿ ಸರ್ ನಾವು ಹೊರಡಬಹುದಾ .. "

"ಮೇಡಂ ಅದೆಂಗೆ ಹೊರಡ್ತೀರಾ.. ಇರೀ ಸ್ವಲ್ಪ ಹೊತ್ತು.. " 

"ಸರ್ ಆಗಲೇ ಬೆಳಗಿನ ಜಾವ  ನಾಲ್ಕು ಘಂಟೆ ದಾಟಿದೆ  . ಇನ್ನೂ ಇರಬೇಕಾ.. "

"ಇರಿ ಮೇಡಂ.. ನೀವು ಬಂದು ಒಂದು ಘಂಟೆ ಮೇಲಾಯಿತು.. ಸುಮ್ಮನೆ ಹಾಗೆ ಕಳಿಸುತ್ತೇವಾ .. ಇರಿ ಒಂದು ನಿಮಿಷ.. .. \ ಶರಣಪ್ಪ ಅವರಿಗೆ ಕಣ್ಣು ಹೊಡೆದರು.. ಶರಣಪ್ಪ ಸಿದ್ಧ ಎನ್ನುವ ಹಾಗೆ ಸನ್ನೆ ಮಾಡಿದರು. 

"ಮೇಡಂ.. ನಿಮ್ಮ ವಿವರ ನಮ್ಮ ಹತ್ತಿರ ಇದೆ.. ಅದರ ಪ್ರಕಾರ ಇವತ್ತು ನಿಮ್ಮ ಜನುಮದಿನ.. ನೀವು ಸ್ನೇಹಕ್ಕೆ ಎಷ್ಟು ಬೆಲೆ ಕೊಡ್ತೀರಾ ಅಂತ ಗೊತ್ತು.. ನಿಮ್ಮ ಸಮಾಜಮುಖಿ  ಕಾರ್ಯಗಳ ಬಗ್ಗೆ ನಮಗೆ ಮತ್ತು ನಮ್ಮ ಡಿಪಾರ್ಟ್ಮೆಂಟಿಗೆ ಗೊತ್ತಿದೆ.. ಅದಕ್ಕೆ ನಮ್ಮ ಡಿಪಾರ್ಟ್ಮೆಂಟ್ ಕಡೆಯಿಂದ ನಿಮಗೆ ಒಂದು ಪುಟ್ಟ ಸನ್ಮಾನ ಜೊತೆಗೆ ಜನುಮದಿನಕ್ಕೆ ಒಂದು ಕೇಕು .. Actually ನಾಳೆ ನಿಮಗೆ ಕರೆ ಮಾಡಿ ನಿಮ್ಮನ್ನು ಇಲ್ಲಿಗೆ ಕರೆಸಿಕೊಂಡು ಈ ಪುಟ್ಟ ಸನ್ಮಾನ ಮಾಡಬೇಕೆಂದುಕೊಂಡಿದ್ದೆವು... ಆದರೆ ಅಚ್ಚರಿ  ಎಂದರೆ ನೀವೇ ಇಲ್ಲಿಗೆ ಬಂದ್ರಿ.. 

"ಜನುಮದಿನದ ಶುಭಾಶಯಗಳು ಮೇಡಂ.. ನಿಮ್ಮ ಈ ಸಮಾಜಮುಖಿ ಕೆಲಸ ಸದಾ ಯಶಸ್ಸನ್ನು ತರುತ್ತಿರಲಿ.. ಶುಭವಾಗಲಿ" 



ಕಣ್ಣಲ್ಲಿ ನೀರು ತುಂಬಿಕೊಂಡು.. "ಶ್ರೀ ಪ್ರತಿ ಜನುಮದಿನದಲ್ಲೂ ಅಳಿಸೋದೇ ಕೆಲಸ ನಿಮ್ಮದು.. ಆದರೆ ಈ ಬಾರಿ ನನ್ನ ಇಷ್ಟವಾದ ಕಾಫೀ ಕೊಟ್ಟು.. ಒಂದು ರೀತಿಯಲ್ಲಿ ಕುತೂಹಲದ ತಿರುವಿನಲ್ಲಿ  ನಮ್ಮನ್ನು ನಿಲ್ಲಿಸಿ ಗೋಳು ಹುಯ್ಕೋತಾ ಇದ್ದೀರಾ.. ಧನ್ಯವಾದಗಳು ಶ್ರೀ.. ನಿಮ್ಮ ಈ ಶುಭಾಶಯಗಳಿಗೆ ಧನ್ಯವಾದಗಳು.. ಹಾಗೆ ಈ ಕೇಸಿನ ವಿಚಾರಣೆ ಮತ್ತು ಇದರ ಮುಂದಿನ ತಿರುವಿನ ಬಗ್ಗೆ ನನಗೆ ಖಂಡಿತ ಹೇಳಬೇಕು .."

ಶರಣಪ್ಪ, ಮೀನಾ, ಸಂಜನಾ ಜೊತೆಯಲ್ಲಿ ಸ್ಟೇಷನಿನಲ್ಲಿ ಇದ್ದ ಎಲ್ಲರೂ ಶುಭ ಹಾರೈಸಿದರು.. 

 ಮೆಲ್ಲನೆ ಸೂರ್ಯ ಬಾನಿನಲ್ಲಿ ರಂಗನ್ನು  ತುಂಬುತಿದ್ದ.. ಮತ್ತೊಂದು ಸ್ಟ್ರಾಂಗ್ ಕಾಫೀ ಕುಡಿದು.. ನವೋಲ್ಲಾಸದಿಂದ ಮೀನಾ ಮತ್ತು ಸಂಜನರನ್ನು ಕರೆದುಕೊಂಡು ಮನೆ ಕಡೆಗೆ ಹೊರಟರು.. 

ಮುಂದೆ.. !!!

Thursday, October 24, 2019

ಸಿಬಿ ಜನುಮದಿನದ ಶುಭಾಷಯಗಳು

ಹರಿಯ ದಶಾವತಾರದ ಬಗ್ಗೆ ಓದಿದ್ದೇವೆ..ಕೇಳಿದ್ದೇವೆ.. ಅದೊಂದು ರೀತಿಯಲ್ಲಿ ದಿನ ನಿತ್ಯದ ವಿಷಯವಾಗಿ ಒಂದಲ್ಲ ಒಂದು ರೀತಿ ನಮ್ಮ ಸುತ್ತಲೂ ಸುತ್ತುತ್ತಲೇ ಇರುತ್ತದೆ.

ಗೆಳೆತನ ಅನ್ನೋದು ಸುಮ್ಮನೆ ಸಿಕ್ಕವರ ಜೊತೆಯಲ್ಲೆಲ್ಲ ಆಗೋಲ್ಲ.. ಗಾಢವಾದ ಗೆಳೆತನ ಆಗಬೇಕೆಂದರೆ ಅಷ್ಟೇ ಆಳವಾದ ಬಂಧನ ಇರಬೇಕು.. ಅಂತಹ ಅತ್ಯುತ್ತಮ ಗೆಳತೀ ನಿವೇದಿತಾ ಚಿರಂತನ್ ಅಲಿಯಾಸ್ ಸಿಬಿ..

ಇವರ ಬುದ್ದಿಮತ್ತೆ, ವಿಷಯ ಚರ್ಚಿಸುವಿಕೆ, ಕಲೆ, ಸಾಹಿತ್ಯ ಇವನ್ನೆಲ್ಲ ಒಮ್ಮೆ ಗಮನಿಸಿದಾಗ ನನಗೆ ಹೊಳೆದದ್ದು.. ಹತ್ತು ವಿಷಯಗಳಲ್ಲಿ ನಿಪುಣನಾದ ಪ್ರಚಂಡ ರಾವಣ ಒಂದು ಕಡೆಯಾದರೆ.. ಹತ್ತು ಅವತಾರಗಳನ್ನು ಎತ್ತಿದ ಹರಿಯ ನೆನಪು ಒಂದು ಕಡೆ..

ಬನ್ನಿ ಅದನ್ನು ಹಾಗೆ ಒಮ್ಮೆ ಗಮನಿಸಿ ಬರೋಣ..

ಮತ್ಸ್ಯಾವತಾರ : ವಿಷಯಗಳ ಪ್ರಳಯ ಆಗುವಾಗ.. ಅದನ್ನು ಸರಿಯಾಗಿ ವಿಶ್ಲೇಷಿಸಿ ಅದಕ್ಕೊಂದು ಸರಿಯಾದ ನೆಲೆ ಕೊಡುತ್ತಾರೆ

ಕೂರ್ಮಾವತಾರ: ಚರ್ಚೆ ಮಾಡುವಾಗ ವಿಷಯದ ಭಾರಕ್ಕೆ.. ಚರ್ಚೆಗಳೇ ಮುಳುಗಿ ಹೋಗುವ ಸಂಭವ ಬಂದಾಗ ಕ್ಷೀರ ಸಾಗರವನ್ನು ಕಡೆಯುವಾಗ ಕೂರ್ಮ ಮುಳುಗುತ್ತಿದ್ದ ಮಂಧರ ಪರ್ವತವನ್ನು ತನ್ನ ಬೆನ್ನ ಮೇಲೆ ಹೊತ್ತು ಕಾರ್ಯ ನೆರವೇರುವಂತೆ ಇವರು ಕೂಡ ಚರ್ಚೆಯ ವಿಷಯ ಭಾರವಾಗಿ ಮುಳುಗದಂತೆ ನೋಡಿಕೊಳ್ಳುತ್ತಾರೆ

ವರಹ: ತನ್ನ ಗೆಳೆಯ ಗೆಳತಿಯರನ್ನು ರಕ್ಷಿಸುವ ಸಮಯ ಬಂದಾಗ ತಮ್ಮ ಶಕ್ತಿ ಮೀರಿ ಜೊತೆಯಾಗಿ ನಿಲ್ಲುತ್ತಾರೆ.. ಮತ್ತೆ ಅವರನ್ನು ಯಥಾಸ್ಥಿತಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಾರೆ

ನರಸಿಂಹ: ನಂಬಿಕೆ, ಭಕ್ತಿಯಿಂದ ಪ್ರಹ್ಲಾದ ಸ್ತುತಿಸಿದಾಗ.. ಕಂಬದಿಂದ ಹೊರಗೆ ಬಂದು.. ರಕ್ಷಿಸಿದ ಹಾಗೆ.. ಇವರು ಜೊತೆಯಲ್ಲಿದ್ದಾಗ ಸೇಫ್ ಅನ್ನುವ ಭಾವ ಇರುತ್ತದೆ..

ವಾಮನ: ಆಕಾರದಲ್ಲಿ ಪುಟ್ಟದಾಗಿದ್ದರೂ ಇಡೀ ಮೂರುಲೋಕಗಳನ್ನು ತನ್ನ ಪಾದದಲ್ಲಿ ಅಳೆಯುವ ವಾಮನನಂತೆ.. ವಿಷಯ ಎಷ್ಟೇ ದೊಡ್ಡದಿರಲಿ.. ಅದರ ಆಕಾರಕ್ಕೆ ಬೆಳೆದು ವಿಷಯವನ್ನು ಮುಟ್ಟಿಸುವ ಪರಿ..

ಪರಶುರಾಮ: ಇಪ್ಪತ್ತದೊಂದು ಬಾರಿ ಭೂಮಂಡಲ ಸುತ್ತಿ ಕ್ಷತ್ರಿಯರನ್ನು ಅಳಿಸಿದಂತೆ.. ಇವರ ಜೊತೆಯಲ್ಲಿ ವಿಷಯವನ್ನು ಚರ್ಚಿಸಿದಷ್ಟು.. ಅದರಲ್ಲಿನ ಬೇಡವಾದ ವಿಷಯಗಳು ನಾಶವಾಗುತ್ತಾ ಹೋಗುತ್ತದೆ..

ರಾಮ: ರಾಮ ಭೋದಿಸಲಿಲ್ಲ.. ಆದರೆ ತಾನು ನೆಡೆದು ಅದನ್ನು ಮಾದರಿಯನ್ನಾಗಿ ಮಾಡಿದ.. ಇವರು ಹಾಗೆ ಹಾಗಿರಿ, ಹೀಗಿರಿ ಅಂತ ಹೇಳದೆ ತಮ್ಮ ವಿಚಾರಗಳ ಮೂಲಕ ತಮ್ಮ ಹಾದಿಯನ್ನು ತೋರುತ್ತಾರೆ..

ಕೃಷ್ಣ:  ಕೃಷ್ಣ ಬಿಡಿಸದ ಸಮಸ್ಯೆಗಳೇ ಇಲ್ಲ ಎನ್ನುತ್ತದೆ ಮಹಾಭಾರತ.. ಇವರ ಹತ್ತಿರ ಯಾವುದೇ ಸಮಸ್ಯೆ, ವಿಷಯಗಳನ್ನು ಹೇಳಿ.. ಅದನ್ನು ಬಿಡಿಸಿ ಅದಕ್ಕೆ ಒಂದು ತಾರ್ಕಿಕ ಪರಿಹಾರ ಕೊಡುತ್ತಾರೆ

ಬುದ್ಧ: ಸತ್ಯ , ಶಾಂತಿಗಾಗಿ ಬುದ್ಧ.. ಇವರ ಬಳಿ ಸತ್ಯ, ಶಾಂತಿ ಸದಾ ಇರುತ್ತದೆ.. ಮತ್ತೆ ಮಂದಸ್ಮಿತೆಯಾಗಿ ಗೆಳೆತನದ ಬಂಧವನ್ನು ಗಟ್ಟಿಗೊಳಿಸುತ್ತಾರೆ

ಕಲ್ಕಿ: ಯಾವುದೇ ವಿಷಯಗಳಲ್ಲಿ ಜಿಜ್ಞಾಸೆ ಮೂಡಿದಾಗ, ವಿಷಯ ಹಾದಿ ಬಿಟ್ಟು ಹೋಗುತ್ತಿದೆ ಎನ್ನುವಾಗ ಇವರ ಮಾತುಗಳು ವಿಷಯಗಳಿಗೆ ಮತ್ತೆ ಮರಳಿ ಬರುವುದೇ ಅಲ್ಲದೆ.. ಶಾಂತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ..

ಇಂತಹ ಹತ್ತಾರು ಸುಮಧುರ, ಸದ್ಗುಣಗಳ ಒಡತಿ ನನ್ನ ಆತ್ಮೀಯ ಗೆಳತೀ ಎನ್ನುವುದರಲ್ಲಿ ನನಗೆ ಹೆಮ್ಮೆ..

ಸಿಬಿ ಜನುಮದಿನದ ಶುಭಾಶಯಗಳು .. ಸುಂದರ ದಿನ ನಿಮದಾಗಲಿ.. !!!

Tuesday, May 7, 2019

DFR... a Phenomenon!

ಜೇನಿನ ಗೂಡಿನಲ್ಲಿ ತನ್ನ ಪಾಡಿಗೆ ತನ್ನ  ಕೆಲಸ ಮಾಡುತ್ತಿರುವ ಜೇನುಗಳು ಒಮ್ಮೆ ತನ್ನ ಗುರುಗಳ ಬಳಿಗೆ ಹೋಗಿ ಕೇಳಿದವು 

"ಗುರುಗಳೇ ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡಿರುತ್ತೇವೆ ಹೂವಿನ ಮಕರಂದ ಹೀರಿ ಜೇನು ಗೂಡು ಕಟ್ಟುತ್ತೇವೆ.. ಮನುಜರಿಗೆ ಜೇನನ್ನು ಕೊಡುತ್ತೇವೆ.. ಇಲ್ಲಿ ನಮ್ಮದೇನಾದರೂ ಮಹಾನ್ ಪ್ರಯತ್ನವಿದೆಯೇ.. ?"

"ಜೇನುಗಳ ಎಂಥಹ ಸುಂದರ ಪ್ರಶ್ನೆ ಕೇಳಿದಿರಿ.. ಇದಕ್ಕೆ ಒಂದು ದೃಷ್ಟಾಂತ ಕತೆ ಹೇಳುತ್ತೇನೆ ಕೇಳಿ"

ಎಲ್ಲವೂ ತಮ್ಮ ಜುಯ್ ಗುಯ್ ಗುಡುವ ಸದ್ದು ಬಿಟ್ಟು ಕಿವಿಯಾನಿಸಿ ಕೂತವು.. 

ಆ ಬೊಮ್ಮ ಒಮ್ಮೆ ತನ್ನ ಸತ್ಯಲೋಕದಲ್ಲಿ ಸೃಷ್ಟಿ ಕಾರ್ಯದಲ್ಲಿ ನಿರತನಾಗಿದ್ದಾಗ.. ವೀಣೆ ಮಿಡಿಯುತ್ತಿದ್ದ ಶಾರದೆ ಕೇಳಿದಳು.. "ಏನ್ರಿ.. ನಿಮ್ಮ ಸೃಷ್ಟಿ ಅಮೋಘ, ಅದ್ಭುತ ಎನಿಸುವುದು ಯಾವಾಗ?"

"ಸರಸು.. ನಾ ಸೃಷ್ಟಿ ಮಾಡಿದ ಪ್ರಪಂಚದಲ್ಲಿ ತನ್ನ ಶಕ್ತಿಗೆ ಅನುಸಾರ ಇತರರ ಮೊಗದಲ್ಲಿ ಮಂದಹಾಸ ಮೂಡಿಸುವ ಚಮತ್ಕಾರ ಕಂಡಾಗ ನನ್ನ ಸೃಷ್ಟಿ ಅಮೋಘ ಅನಿಸುತ್ತದೆ.. "

ಕಿರೀಟ ತೆಗೆದಿಟ್ಟು.. ಬ್ರಹ್ಮನ ಮುಂದೆ ಬಂದು.. "ಸರಿಯಾಗಿ ಹೇಳಿ"

"ಸರಸು ನಗುವೆಂಬುದು ಒಂದು ಅಸ್ತ್ರ.. ಅದನ್ನು ಉಪಯೋಗಿಸುತ್ತ ಇದ್ದಾಗ.. ಎಲ್ಲವೂ ಸರಳವಾಗಿ, ನೇರವಾಗಿ ನಮಗೆ ದಾರಿ ಕಾಣುತ್ತದೆ.. ಕೃಷ್ಣನನ್ನು ಹೊತ್ತು ಸಾಗುವಾಗ ಯಮುನೆ ವಸುದೇವನಿಗೆ ಹಾದಿ ಬಿಟ್ಟ ಹಾಗೆ.. ನಗುವಿದ್ದಾಗ ಜಗವೇ ಸುಂದರ.. "

"ಏನೋ ರೀ.. ಇವತ್ತು ನಿಮ್ಮ ಮಾತು ಆ ಶ್ರೀಕಾಂತನ ತರಹ ಇದೆ.. ಏನೋ ಹೇಳುತ್ತೀರಿ.. ಏನೋ ಬರೆಯುತ್ತೀರಿ.. ಅರ್ಥವಾಗುತ್ತಿಲ್ಲ.. ಸರಿ ಒಮ್ಮೆ ಅವನನ್ನೇ ಕೇಳಿಬಿಡೋಣ ಬನ್ನಿ.. "

"ಮಗು ಶ್ರೀಕಾಂತ.. ನೀನು ಜನುಮದಿನ, ವಿವಾಹದಿನಾ.. ಅದು ಇದು ಅಂತ ಏನಾದರೂ ಗೀಚುತ್ತಲೇ ಇರುತ್ತೀಯ ಇದರಿಂದ ನಿನಗೇನೂ ಉಪಯೋಗ ಹೇಳುವೆಯಾ.. ?

ಬ್ರಹ್ಮನಿಗೆ ಮತ್ತು ಶಾರದೆಗೆ ನಮಸ್ಕರಿಸಿ.. "ದೇವಾ.. ನೀವು ತಲೆಯೊಳಗೆ ಇಟ್ಟುಕೊಟ್ಟ ಬುದ್ದಿಯನ್ನು ಉಪಯೋಗಿಸಿ ಅನಿಸಿದ್ದು ಬರೆಯುತ್ತೇನೆ.. ಇದರಲ್ಲಿ ದೊಡ್ಡತನವೇನು ಇಲ್ಲ.. ಇದರಲ್ಲಿ ಲಾಭ ನಷ್ಟವೇನು ಇಲ್ಲ.. ಜೇನುಗಳು ಹೂವುಗಳ ಮಕರಂದ ಹೀರಿ ಜೇನು ಮಾಡುತ್ತವೆ.. ಆ ಜೇನನ್ನು ಮನುಜ ಉಪಯೋಗಿಸುತ್ತಾನೆ.. ಹಾಗೆಯೇ ನನ್ನ ತಲೆಯೊಳಗೆ ನೀವು ಕೂತು ಬರೆಸುವ ಮಾತುಗಳಿಂದ... ಅವರ ಮೊಗದಲ್ಲಿ ಒಂದು ಸಣ್ಣ ನಗೆ ಬಂದರೆ ಸಾಕು ನನ್ನ ಜೀವನ ಸಾರ್ಥಕ.. ಜೇನಿನ ಉಪಯೋಗವಾದಾಗ ಜೇನು ನೊಣಗಳಿಗೆ ಸಾರ್ಥಕತೆ ಸಿಗುವ ಹಾಗೆ ಇದು.. " ಇದೆ ಮಾತನ್ನು ಮುಂದುವರೆಸುತ್ತಾ "ಜೇನಿನ ರುಚಿ, ಹೂವಿನ ಸುಗಂಧ, ತಂಗಾಳಿಯ ಹಿತ, ಸಮಾಜದಲ್ಲಿ ನಾಲ್ಕು ಜನಗಳಿಗೆ ಸಹಾಯ.. ಅವರಿಂದ ಹೊಗಳಿಕೆ, ಪ್ರಶಂಸೆ ಇಷ್ಟ ಪಡದೆ.. ತನ್ನ ಕಾಯಕದಲ್ಲಿ ತೊಡಗುವ ಪರಿಯೇ ಈ ಜೇನಿನ ಜೀವನ.. ಹಾಗೆ ಅದ್ಭುತ ಗೆಳತೀ ರೂಪ ಸತೀಶ್ ಅಲಿಯಾಸ್ DFR ಕೂಡ.. ಅವರ ಹುಟ್ಟಿದ ಹಬ್ಬ ಅಂದರೆ.. ಅವರನ್ನು ಅಕ್ಕ ಎಂದು ಆರಾಧಿಸುವ ಅನೇಕ ಅಕ್ಕ, ತಮ್ಮಗಳು, ಅಣ್ಣ, ತಂಗಿಯರು.. ಅವರ ಮನೆಗೆ ಹೋಗಿ.. ಅವರ ಬಿಡುವಿಲ್ಲದ ಕೆಲಸದ ನಡುವೆಯೂ ಅವರಿಗೆ ಶುಭಕೋರಿ, ಕೇಕ್ ಕಟ್ ಮಾಡಿ.. ಸಂಭ್ರಮಿಸುವ ಪರಿ.. ಇದಕ್ಕೆ ಸ್ವಾರ್ಥ ಎಲ್ಲಿದೆ.. ಎಲ್ಲವೂ ಮಮತೆ, ವಿಶ್ವಾಸ, ಪ್ರೀತಿ.. ಮಮಕಾರ.. ಅವರನ್ನು ಗೌರವಿಸಿ ತಮ್ಮನ್ನೇ ಗೌರವಿಸಿಕೊಳ್ಳುವ ಪರಿ.. "

*****

ನೋಡೀದಿರೇನಪ್ಪಾ .. ಜೇನಿನ ಕಾರ್ಯಕ್ಷಮತೆ, ರೂಪ ಸತೀಶ್ ಅವರ ಕಾರ್ಯಕ್ಷಮತೆ.. ಇವೆಲ್ಲವೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳು... ಅಂದು ಕನಕದಾಸರು "ನಾ"ಹೋದರೆ ಹೋಗಬಹುದು ಎಂದಿದ್ದರು.. ಇಂದು ರೂಪ ಸತೀಶ್ "ನಾ"ಇದ್ದರೇ ಮಂದಹಾಸ ನಲಿದಾಡುವುದು ಎಂದು ಹೇಳುತ್ತಾರೆ.. ಗಿಡದಲ್ಲಿ ಮುಳ್ಳಿದ್ದ ಮಾತ್ರಕ್ಕೆ ಹೂವು ಸುಂದರವಾಗಿರೋಲ್ಲ.. ಮುಳ್ಳನ್ನು ಮೆಟ್ಟಿ ನಿಂತು ಮುಳ್ಳನ್ನು ಮರೆಮಾಚಿ ಹೂವಿನ ಅಂದ ಕಾಣಿಸುವ ಹಾಗೆ.. ಮೊಗದಲ್ಲಿ ನಗುವಿದ್ದಾಗ ಜಗದಲ್ಲಿ ನೋವಿಗೆ ಜಾಗವೆಲ್ಲಿ.. ಜೇನುಗಳ ನಿಮ್ಮ ಸ್ವಾರ್ಥ ರಹಿತ ಕೆಲಸ.. ನಮ್ಮೆಲ್ಲರ ನೆಚ್ಚಿನ ರೂಪ ಸತೀಶ್ ಅವರ ಕಾಯಕ ಎರಡೂ ಒಂದೇ.. 


ಜೇನುಗಳಿಗೆ ಅರ್ಥವಾಯಿತು.. ಕಥಾ ಸಾರಾಂಶ.. ಜೊತೆಯಲ್ಲಿ ಇಂದು ನಮ್ಮಂತೆಯೇ ಕಾರ್ಯನಿರತವಾಗಿರುವ ರೂಪ ಸತೀಶ್ ಅವರ ಜನುಮದಿನ ಕೂಡ ಎಂದು ಅರಿವಾಯಿತು.. ಗುಯ್ ಎನ್ನುತ್ತಾ ತಮ್ಮ ಭಾಷೆಯಲ್ಲಿ ಜನುಮದಿನಕ್ಕೆ ಶುಭಾಶಯಗಳನ್ನು ಕೋರಿದವು.. !!!

DFR ಜನುಮದಿನದ ಶುಭಾಶಯಗಳು!!!

Sunday, December 30, 2018

ಮತ್ತೆ ಬಾಲ್ಯಕ್ಕೆ ಶಾಲಾದಿನಗಳ ಕಡೆಗೆ.. 30.12.2018

​​
ಗೆಳೆತನ ಎಂದರೇನು..

ಶಾಲೆದಿನಗಳಲ್ಲಿಯಾಗಲಿ, ಸಹೋದ್ಯೋಗಿಗಳ ಜೊತೆಯಾಗಲಿ ಒಂದಷ್ಟು ಅದ್ಭುತ ಕ್ಷಣಗಳನ್ನು ನೆನೆಪಿಸಿಕೊಂಡು ಖುಷಿ ಪಡುವ ಆ ಘಳಿಗೆಗಳು ಅತ್ಯಮೂಲ್ಯ..

ಗೆಳೆತನ ಶುರುವಾಗೋದು ನಮ್ಮ ಪದವಿ, ಅಂತಸ್ತು, ಸಾಮಾಜಿಕ ಸ್ಥಾನಗಳಿಂದಲ್ಲ.. ಶುದ್ಧ ಮನಸ್ಸಿನ ಸರೋವರವದು.. ನಾವೆಲ್ಲಾ ಭೇಟಿಯಾಗೋದು ಇಂದು ನಾವೇನಾಗಿದ್ದೇವೆ ಎಂಬುದಕ್ಕಲ್ಲ.. ಅಂದು ನಾವು ಗೆಳೆಯರಾಗಿದ್ದೆವು ಇಂದೂ ಆ ಗೆಳೆತನದ ಭಾವವನ್ನು ಮುಂದುವರೆಸಿಕೊಂಡು ಹೋಗೋಣ ಎನ್ನುವ ಮನೋಸ್ಥಿತಿಯಿಂದ ಮಾತ್ರ ಭೇಟಿ ಸಾಧ್ಯ..

ಹೇಗೆ ನಿಂತಿದ್ದೇವೆ ಎನ್ನುವುದಕ್ಕಿಂತ ಗೆಳೆಯರ ಜೊತೆ ನಿಲ್ಲುವುದು ಮುಖ್ಯ..
(ಎಲ್ಲಾ ಗಾಡಿಗಳು ಒಂದು ದಿಕ್ಕಿನಲ್ಲಿ ನಿಂತಿದ್ದಾರೆ...
ಒಂದೇ ಒಂದು ಗಾಡಿ ವಿರುದ್ಧ ದಿಕ್ಕಿನಲ್ಲಿ ನಿಂತಿದೆ..
ಈ ಚಿತ್ರ ತೆಗೆಯಲು ಸ್ಫೂರ್ತಿ ನೀಡಿದ ರೂಪಶ್ರೀಗೆ ವಂದನೆಗಳು) 

ನ್ಯಾಷನಲ್ ಹೈ ಸ್ಕೂಲಿನಲ್ಲಿ ಓದಿದ್ದ ನಮ್ಮ ಸಹಪಾಠಿಗಳನ್ನು ಸುಮಾರು ೨೦೧೧ಇಸವಿಯಿಂದ ಅಂದ್ರೆ ಸುಮಾರು ಏಳು ವರ್ಷಗಳಿಂದ  ಭೇಟಿ ಮಾಡುತ್ತಲೇ ಇದ್ದೇವೆ.. ವರ್ಷ ವರ್ಷಕ್ಕೂ ಬರುವ ಗೆಳೆಯರ ಸಂಖ್ಯೆ ಬೆಳೆಯುತ್ತಿದೆ.. ಖುಷಿಯ ಸಂಗತಿ..  ಹಲವಾರು ವರ್ಷಗಳ ನಂತರ ಭೇಟಿಯಾದಾಗ ಸಿಗುವ ಆ ಖುಷಿ.. ಸಾಮಾಜಿಕ ಜಾಲತಾಣಗಳಿಲ್ಲದ ನಮ್ಮ ಆ ದಿನಗಳಿಂದ.. ಇಂದು ಬೆರಳಿನ ತುದಿಯಲ್ಲಿ ಪ್ರಪಂಚವೇ ಸಿಗುವ ಈ ದಿನಗಳ ನಡುವೆ ನಮ್ಮ ಗೆಳೆತನ ಗಟ್ಟಿಯಾಗಿ ನಿಂತಿರುವುದು ನಮ್ಮ ಶುದ್ಧ ಮನಸ್ಥಿತಿಯಿಂದ, ಗೆಳೆತನಕ್ಕೆ ಹಾತೊರೆಯುವ ನಮ್ಮೆಲ್ಲರ ಮನಸ್ಸಿನಿಂದ ಮಾತ್ರ..

ಅನಿಲ್,  ಗಿರೀಶ್ (ಎಚ್ ಡಿ ಮತ್ತು ಕೆ ಎಸ್), ಕಿರಣ್, ವೆಂಕಟೇಶ, ಚಂದ್ರಪ್ರಭ, ಕುಸುಮ, ನರೇಂದ್ರ ಇವರೆಲ್ಲಾ ಮೊದಲ ಬಾರಿಗೆ ಸಿಕ್ಕಾಗ ಸಂಭ್ರಮಿಸಿದ ಘಳಿಗೆಗಳು ಸೊಗಸಾಗಿದ್ದವು..

ಇಂದು ಕುಸುಮ ಮೊದಲ ಬಾರಿಗೆ ನಮ್ಮ ಗೆಳೆತನದ ಭೇಟಿಗೆ ಬಂದಾಗ.. ಅವರ ಮಾತುಗಳಲ್ಲಿ ನಾ ಕಂಡಿದ್ದು.. ಹೇಗೆ ಮಾತಾಡುವುದು, ಏನು ಮಾತಾಡುವುದು ಎನ್ನುವ ಗೊಂದಲ ಎನ್ನುವುದಕ್ಕಿಂತ ಹಿಂಜರಿಕೆ.. ಆದರೆ ನಮ್ಮ ವೆಂಕಿ ಇದ್ದಾನಲ್ಲ. ಅವನು ಯಾರನ್ನು ಆ ಗೊಂದಲದಲ್ಲಿ ಇರಲು ಬಿಡುವುದಿಲ್ಲ.. ಅವರ ಲೆವೆಲ್ಲಿಗೆ ಹೋಗಿ ಮೆಲ್ಲಗೆ ಕೈಹಿಡಿದು ನಮ್ಮೆಲ್ಲರ ಲೆವೆಲ್ಲಿಗೆ ಕರೆತರುವ ಅವನ ಮಾತುಗಳಿಗೆ ಸೋಲದವರು ಯಾರಿದ್ದಾರೆ..


ಸ್ವಲ್ಪ ಹೊತ್ತಿನಲ್ಲಿಯೇ ಕುಸುಮ ಸಹಜವಾಗಿ ಮಾತಾಡಲು ಶುರುಮಾಡಿದಳು... ಶಶಿ ಜೊತೆ ಫಾರ್ಮಲ್ ಆಗಿ ಆಡುತ್ತಿದ್ದ ಮಾತುಗಳು ವೆಂಕಿ ಬಂದಮೇಲೆ ಆರಾಮಾಗಿ ಶುರುವಾಯಿತು.. ನಂತರ ಲೀಲಾ, ರೂಪ, ಚಂದ್ರಪ್ರಭ ಬಂದ ಮೇಲೆ ಇನ್ನಷ್ಟು ಹಗುರಾಯಿತು.. ಆಗ ಸಿಕ್ಕಿದ್ದು ಮಾಸ್ಟರ್ ಸ್ಟ್ರೋಕ್ ಗಿರೀಶ್.. ಅವನ ಲೀಲಾಜಾಲವಾದ ಮಾತುಗಳು ಎಲ್ಲರನ್ನು ಇನ್ನಷ್ಟು ಹಗುರ ಮಾಡಿತು.. ಇಂದು ನಾವೆಲ್ಲರೂ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಬೆಳೆದು ನಿಂತಿದ್ದೇವೆ ನಿಜ.. ಆದರೆ ನಮ್ಮ ಭೇಟಿ ನಾವು ಮೂರು ವರ್ಷ ಹೈ ಸ್ಕೂಲ್ ದಿನಗಳ ಗೆಳೆತನದ ಸುತ್ತ ಮಾತ್ರ ಸುತ್ತುತ್ತಿತ್ತು..


ಅಮೆರಿಕಾದಲ್ಲಿರುವ ರಮೇಶ್ ಸ್ಕೈಪ್ ಆಪ್ ಮೂಲಕ ನಮ್ಮೆಲ್ಲರ ಜೊತೆ ಮಾತಾಡಿದ್ದು..  ಬಹಳ ವರ್ಷಗಳ ನಂತರ ಸಿಕ್ಕಿದ್ದು ಅವನಿಗೂ ಖುಷಿ.. ಗೆಳೆಯನ ಜೊತೆ ಮಾತಾಡಿದ್ದು ನಮಗೂ ಖುಷಿ.. ಸುಮಾರು ಹದಿನೈದು ನಿಮಿಷಗಳು ಕರೆ ಮೂವತ್ತು ವರ್ಷಗಳ ಇತಿಹಾಸವನ್ನು ರೀವೈ೦ಡ್ ಮಾಡಿತ್ತು...

ಪ್ರಸಾದ್ ಬಂದ...  ಮಾತುಗಳು ಇನ್ನಷ್ಟು ಹಾಸ್ಯವನ್ನು ತುಂಬಿಕೊಂಡವು.. ಗೆಳೆಯರ ಕಾಲು ಎಳೆಯುವುದು, ನಗುವುದು ನೆಡೆದಿತ್ತು.. ಶ್ರೀಧರ ಬಂದ ಮೇಲೆ ವೆಂಕಿಯ ಸುತ್ತಾ ಮಾತುಗಳು ಜಾಸ್ತಿಯಾದವು.. (ಇಲ್ಲ ಇಲ್ಲ ಮುತ್ತತ್ತಿ ಅಡಿಗೆಯ ವಿಷಯ ಮಾತಾಡೋಲ್ಲ). ಮಾತು ಮಾತು ಮಾತು ಮುಗಿಯದಷ್ಟು ಮಾತುಗಳು.. ಗಿರೀಶನ ಶಾಲಾದಿನಗಳ ಘಟನೆಗಳು, ಹದಿನೈದು ವರ್ಷಗಳು ಸತತವಾಗಿ ಈ ಕೆಳಗಿನ ಶ್ಲೋಕವನ್ನು ಹೇಳಿದ ದಾಖಲೆ ಅವನದು ..

ಯಂ ಬ್ರಹ್ಮಾವರುಣೇಂದ್ರ ರುದ್ರಮರುತಃ
ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದ್ಯೆಸ್ಸಾಂಗಪದಕ್ರಮೋಪನಿಷದೈಃ
ಗಾಯಂತಿ ಯಂ ಸಾಮಗಾಃ
ಧ್ಯಾನಾವಸ್ಥಿತ ತದ್ಗತೇನ ಮನಸಾ
ಪಶ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ಮಿದುಸ್ಸುರಾಸುರ ಗಣಾಃ
ದೇವಾಯ ತಸ್ಮೈ ನಮಃ.. ಇನ್ನೂ ಇದೆ..


ಮಾತುಗಳ ಬತ್ತಳಿಕೆ ಮುಗಿದಿರಲಿಲ್ಲ.. ಆದರೆ ಹೊಟ್ಟೆ ಚುರುಗುಟ್ಟುತ್ತಾ ಇತ್ತು.. ಹಾಗಾಗಿ.. ಎಸ್ ಎಲ್ ವಿ ಕಡೆಗೆ ಹೆಜ್ಜೆ ಹಾಕಿದೆವು.. ಅಲ್ಲಿ ತಿಂದದ್ದು ಹೋಟೆಲಿನವ ತಂದು ಕೊಟ್ಟಿದ್ದನ್ನು ಆದರೆ.. ಅದರಿಂದ ಹೊಟ್ಟೆ ತುಂಬಿದ್ದಕಿಂತ ನಮ್ಮೆಲ್ಲರ ಹಾಸ್ಯ ಚಟಾಕಿಗಳಿಂದ ಹೊಟ್ಟೆ ತುಂಬಿದ್ದು ಹೆಚ್ಚು.. ಕೆಲವರಿಗೆ ಕಣ್ಣಲ್ಲಿ ನೀರು ತರಿಸುವಷ್ಟು ನಗೆ ಬಂದರೆ, ಇನ್ನು ಕೆಲವರಿಗೆ ಮಾತಾಡಲು ಆಗದಷ್ಟು ನಗೆ ಹೂರಣ ಬಡಿಸಿತ್ತು.. ಗಿಜಿಗಿಜಿ ಗುಟ್ಟವ ಭಾನುವಾರದ ದಿನವೂ, ನಮ್ಮ ಮಾತುಗಳಿಂದ ಅಲ್ಲಿ ಒಂದು ದೊಡ್ಡ ಸ್ಫೋಟವೇ ಆಗಿತ್ತು... ಅಕ್ಕಪಕ್ಕದವರ ಪರಿವೆ ನಮಗ್ಯಾರಿಗೂ ಇರಲಿಲ್ಲ.. ನಾವು  ನಮ್ಮ ಮಾತುಗಳು ನಮ್ಮ ಗೆಳೆಯರು.. ಇಷ್ಟೇ ತಲೆಯಲ್ಲಿದ್ದದ್ದು..


ಅನೂಪ್ ನಮ್ಮ ಗ್ಯಾಂಗ್ ಸೇರಿದ್ದು ತಡವಾಗಿದ್ದರೂ ... ಅವನ ಮಾತುಗಳು ಹಾಸ್ಯರಸವನ್ನು ಇನ್ನಷ್ಟು ಮೇಲಕ್ಕೇರಿಸಿತ್ತು .. ಇನ್ನೊಂದಷ್ಟು ಮಾತುಗಳು, ಅವನ ಕೆಲವು ಅನುಭವಗಳು ಮುದನೀಡಿತ್ತು..

ನಾವು ಸೇರಿದ್ದೇವೆ ಅಂದರೆ ಏನಾದರೂ ತರಲೆ ಇರಲೇ ಬೇಕಲ್ಲವೇ.. ಲೀಲಾ.. ಫೈರ್ ಪಾನ್ ತಿಂತೀನಿ ಅಂದಾಗ ನಮ್ಮೆಲ್ಲರ ಮೊಬೈಲ್, ಕ್ಯಾಮೆರಾ ಅತ್ತ ಕಡೆ ತಿರುಗಿತ್ತು.. ಮುಂದೆ ನೆಡೆದದ್ದು ಇನ್ನೊಂದು ನಗೆಯ ಮೆರವಣಿಗೆ.. ಫೈರ್ ಪಾನ್ ಹೇಗಿತ್ತು ಹೇಗಿರಲಿಲ್ಲ ಎನ್ನುವುದಕ್ಕಿಂತ... ನಮ್ಮ ನಗೆಯ ತೇರನ್ನು ಎಳೆಯೋಕೆ ಇನ್ನೊಂದು ಅಸ್ತ್ರ ಸಿಕ್ಕಿದ್ದು ಸುಳ್ಳಲ್ಲ..



ಈ ಭೇಟಿಗಳಲ್ಲಿ ಸಾಮಾನ್ಯ ಎರಡು ಘಂಟೆ ಕಳೆಯುವ ನಾವು ಇಂದು.. ಬೆಳಿಗ್ಗೆ ಹನ್ನೊಂದರಿಂದ ಓಹ್ ಸಾರಿ ಹತ್ತು ಮುಕ್ಕಾಲು ಘಂಟೆಯಿಂದ ಮದ್ಯಾನ್ಹ ಮೂರುವರೆ ಘಂಟೆಯ ತನಕ ನಾನ್ ಸ್ಟಾಪ್ ಹಾಸ್ಯ ಬಸ್ಸಲ್ಲಿ ಓಡಾಡಿದ್ದು ವಿಶೇಷ..



ಮೂರು ದಾರಿ ಸೇರುವ ಜಾಗದಲ್ಲಿ ಗಣಪತಿಯ ವಿಗ್ರಹ, ಫೋಟೋ ಇಟ್ಟು ಪೂಜಿಸುತ್ತಾರೆ.. ಎಲ್ಲೆಡೆಯೂ ಕಾಣುವ ಆ ಮಹಾಮಹಿಮನನ್ನ ಮರದಲ್ಲಿ ಕಂಡರೆ.. ಎಲ್ಲಾ ದಿಕ್ಕುಗಳಲ್ಲಿಯೂ ಪಸರಿಸಿರುವ ನಮ್ಮ ಗೆಳೆತನದ ಅಧಿನಾಯಕ ನಮ್ಮೆಲ್ಲರ ಮನಸ್ಸು. ಅದನ್ನು ನಮ್ಮ ಎಲ್ಲಾ ಗೆಳೆಯರ ಮನದಲ್ಲಿ ಕಾಣುತ್ತಿದ್ದೇವೆ..  ಅದಕ್ಕೆ ಒಂದು ಸಲಾಂ ಹೇಳೋಣ ಅಲ್ಲವೇ..
ಲೋ ಶ್ರೀಕಿ ಈ ಚಿತ್ರ ತೆಗೆಯೋ ನಿನಗೆ ಬರೆಯೋದಕ್ಕೆ
ಉಪಯೋಗವಾಗುತ್ತದೆ ಎಂದ ವೆಂಕಿಗೆ ಒಂದು ಸಲಾಂ 
ಒಂದು ಭಾನುವಾರವನ್ನು ಆಲಸ್ಯವಾಗಿ ಅದರಲ್ಲೂ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಆರಾಮಾಗಿ ಕಳೆಯುವ ಭಾನುವಾರವನ್ನು ಸಂತಸ, ಉಲ್ಲಾಸಯುಕ್ತ ದಿನವನ್ನಾಗಿ ರೂಪಿಸಿಕೊಂಡಿದ್ದು ನಮ್ಮ ಗೆಳೆತನದ ವಿಶೇಷವಾಗಿತ್ತು..

ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ.. ಗೆಳೆತನ ಇರಲಿ ಚಿರಕಾಲ..